ಗಸ್ತು ವೇಳೆ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಗಂಗಾವತಿ ತಾಲೂಕಿನ ಉಡಮಕಲ್ ಗ್ರಾಮದ ಶರಣಪ್ಪ ತಂದೆ ಇಂದ್ರೇಪ್ಪ ಮರಳಿ (26) ಬಂಧಿತ ಆರೋಪಿ.
ಗಿಣಿಗೇರಿ ಬಸಾಪುರ ಗ್ರಾಮದ ಬಾಳಪ್ಪ ಹನುಮಂತಪ್ಪ ಸಿಂಧೋಗಿ ಅವರು ನೀಡಿದ ಬೈಕ್ ಕಳ್ಳತನದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೋಲೀಸರು, ಅಂದಾಜು 16 ಲಕ್ಷ ಮೌಲ್ಯದ ವಿವಿಧ ಕಂಪನಿಯ 24 ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣದ ಪತ್ತೆಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಆರ್ ಹೇಮಂತ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಡಿಎಸ್ಪಿ ಮುತ್ತಣ್ಣ ಸರವಗೋಳ ಸಿಪಿಐ ಸುರೇಶ್ ಚೌವ್ಹಾಣ್ ನೇತೃತ್ವದಲ್ಲಿ ಪಿಎಸ್ಐ ಸುನಿಲ್ ಎಚ್, ಹಾಗೂ ಕ್ರೈಂ ಪಿಎಸ್ಐ ಮಲ್ಲಪ್ಪ, ಇನಾಯತ್, ಮಹೇಶ್ ಸಜ್ಜನ್, ರಾಜಶೇಖರ್,ಈರೇಶ, ಶಿವಶಂಕರ್, ಮಹಾಂತೇಶ,ವಾಹನ ಚಾಲಕರಾದ ವೆಂಕಟೇಶ್, ಚಂದ್ರಶೇಖರ್, ಶರಣಪ್ಪ, ಹೆಡ್ ಕಾನ್ಸ್ಟೆಬಲ್ ಹಾಗೂ ಪಿಸಿ ಅವರನ್ನೊಳಗೊಂಡ ತಂಡ ಆರೋಪಿಯನ್ನು ಬಂಧಿಸಿದೆ.
ಯಶಸ್ವಿ ಕಾರ್ಯಾಚರಣೆ ನಡೆಸಿದ ಪೋಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಪೋಲೀಸ್ ಅಧೀಕ್ಷಕರು ಡಾ.ರಾಮ್, ಎಲ್ ಅರೆ ಸಿದ್ದಿ ಪ್ರಶಂಸೆ ವ್ಯಕ್ತಪಡಿಸಿ ಬಹುಮಾನ ಘೋಷಿಸಿದ್ದಾರೆ.