ಬಳ್ಳಾರಿ ಜಿಲ್ಲಾ ಯುವ ಘಟಕದ ಸಂಚಾಲಕರಾಗಿ ನಾಗರಾಜ ನೇಮಕ : ಎಂ.ಜಿ ಕನಕ
ಬಳ್ಳಾರಿ: ಕರ್ನಾಟಕ ಅಹಿಂದ ಜನ ಸಂಘದ ರಾಜ್ಯಾಧ್ಯಕ್ಷ ಅಯ್ಯಪ್ಪಗೌಡ ಅವರ ಸೂಚನೆ ಮೇರೆಗೆ ಮೇರೆಗೆ ಬಳ್ಳಾರಿ ಜಿಲ್ಲಾಧ್ಯಕ್ಷ ಎಂ.ಜಿ ಕನಕ ಅವರು ನೂತನ ಅಹಿಂದ ಬಳ್ಳಾರಿ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಯಾಳ್ಪಿ ಶೇಕ್ಷಾವಲಿ ಹಾಗೂ ಬಳ್ಳಾರಿ ಜಿಲ್ಲಾ ಯುವ ಘಟಕದ ಸಂಚಾಲಕರಾಗಿ ನಾಗರಾಜ ಅವರನ್ನು ನೇಮಕ ಮಾಡಿದರು.
ನಂತರ ಬಳ್ಳಾರಿ ಜಿಲ್ಲಾಧ್ಯಕ್ಷರಾದ ಎಂ.ಜಿ ಕನಕ ಅವರು ನೂತನ ಅಹಿಂದ ಬಳ್ಳಾರಿ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಯಾಳ್ಪಿ ಶೇಕ್ಷಾವಲಿ, ಬಳ್ಳಾರಿ ಜಿಲ್ಲಾ ಯುವ ಘಟಕದ ಸಂಚಾಲಕರಾಗಿ ನಾಗರಾಜ ನೇಮಕ ಅವರನ್ನು ನೇಮಕಾತಿ ಆದೇಶ ಪತ್ರವನ್ನು ಕೊಡುವ ಮೂಲಕ ಶುಭ ಕೋರಿದರು.
ನನ್ನ ಸಮಾಜ ಸೇವೆ ಕಂಡು ನನಗೆ ಅಹಿಂದ ಬಳ್ಳಾರಿ ಗ್ರಾಮಾಂತರ ಯುವ ಕಾರ್ಮಿಕ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ ಬಳ್ಳಾರಿ ಜಿಲ್ಲಾಧ್ಯಕ್ಷರಾದ ಎಂ.ಜಿ ಕನಕ ಅವರಿಗೆ ಹಾಗೂ ಅಹಿಂದ ಎಲ್ಲಾ ಪದಾಧಿಕಾರಿಗಳಿಗೆ ಹೃತೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ. ಮತ್ತು ಅಹಿಂದ ಸಂಘದ ಎಲ್ಲಾ ಸದಸ್ಯರನ್ನು ಒಟ್ಟುಗೂಡಿಸಿ, ಸಂಘದ ಬೆಳವಣಿಗೆಗಾಗಿ ದುಡಿಯುತ್ತೇನೆ ಎಂದು ಯಾಳ್ಪಿ ಶೇಕ್ಷಾವಲಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಮೊಹಮ್ಮದ್ ರಿಯಾಜ್, ಬಳ್ಳಾರಿ ಜಿಲ್ಲಾ ಗೌರವಾಧ್ಯಕ್ಷರಾದ ಬಿ.ಮಾರುತಿ, ಪ್ರಧಾನ ಕಾರ್ಯದರ್ಶಿ ಉಮಾರ್ ಫಾರೂಕ್, ಜಿಲ್ಲಾ ಉಪಾಧ್ಯಕ್ಷರಾದ ಚೇಳ್ಳಗುರ್ಕೀ ನಾಗರಾಜ್, ಯುವ ಜಿಲ್ಲಾಧ್ಯಕ್ಷರಾದ ಕಿರಣ್ ಕುಮಾರ್, ಜಿಲ್ಲಾ ಸಂಘಟನೆ ಕಾರ್ಯದರ್ಶಿಯಾದ ಸಿ.ಗಂಗಾಧರ್, ನಗರ ಉಪಾಧ್ಯಕ್ಷರಾದ ಮೆಹಬೂಬ್, ಬಾಷಾ ಕಾರ್ಮಿಕ ಯುವ ಘಟಕದ ಗ್ರಾಮಾಂತರ ಅಧ್ಯಕ್ಷರಾದ ರಾಮಕೃಷ್ಣ, ನಗರ ಉಪಾಧ್ಯಕ್ಷರಾದ ಖಾಲಿದ್ ಬಾಷ ಹಾಗೂ ಯುವ ಘಟಕದ ಗ್ರಾಮಾಂತರ ಅಧ್ಯಕ್ಷರಾದ ವೈಫೈ ಶಿವು, ಬಾಷ, ಸುನೀಲ್, ಭೀಮ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.