ಇಲ್ಲಿನ ಟೇಲರ್ ಬೀದಿಯಲಿ ರುವ ಶ್ರೀ ಪಾಂಡುರಂಗ ದೇವಸ್ಥಾನ ದಲ್ಲಿ ಆಷಾಡ ಬಹುಳ ಏಕಾದಶಿ ಅಂಗವಾಗಿ ಆಯೋಜಿಸಿದ್ದ ಧಾಮಿ೯ಕ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಕಾಯ೯ಕ್ರಮಗಳೂ ನಡೆದವು. ಪ್ರತಿನಿತ್ಯ ಬೆಳಿಗ್ಗೆ ಕಾಕಡಾರತಿ, ಜ್ಞಾನೇಶ್ವರಿ ಪಾರಾಯಣ, ಮಧ್ಯಾಹ್ನ ಪಂಢರಿ ಸಾಂಪ್ರದಾಯಕ ಭಜನೆ, ದಿಂಡಿ ಸೋಹಳಾ ನಡೆದವು.
ಸಂಜೆಯ ಹೊತ್ತು ಭಾರತಿ ನಾಟ್ಯ ಕಲಾ ಟ್ರಸ್ಟ್ ನ ವೈಷ್ಣವಿ ಕುಲಕಣಿ೯ ಮತ್ತು ತಂಡವದವರಿಂದ ಭರತನಾಟ್ಯ, ಕೋಲಾಟ, ಭಜನಾ ತಂಡಗಳಿಂದ ಸಂಗೀತ ಹಾಗೂ ಭಜನೆ ನಡೆದವು. ಶ್ರೀ ಪಾಂಡುರಂಗ ರುಕ್ಮಿಣಿ ವಿಗ್ರಹಗಳಿಗೆ ರಜತ ಕವಚ ಧಾರಣೆ ಮಾಡಿ ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಿದ್ದ ಭಕ್ತರು ಜಗತ್ತಿನ ತಂದೆ-ತಾಯಿಯರ ವೈಭವ ಕಂಡು ಭಕ್ತಿ ಪರವಶರಾದರು. ವಾರಕರಿ ಸಂತ ಸಮಾರಾಧನೆ ನಡೆಯಿತು. ದೇವಸ್ಥಾನ ದ ಅಚ೯ಕರಾದ ವೆಂಕಟೇಶಾಚಾರ್ ಪೂಜಾ ಕೈಂಕಯ೯ಗಳನ್ನು ನೇರವೇರಿಸಿದರು.

ಈ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾಯ೯ಕ್ರಮಗಳಲ್ಲಿ ಹಾನಗಲ್, ಹೊಸಪೇಟಿ, ಕೊಪ್ಪಳ, ಬೆಳಗಾವಿ ಅಲ್ಲದೆ ಇನ್ನೂ ಹಲವಾರು ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳ ಭಜನಾ ಮಂಡಳಿಗಳು ಪಾಲ್ಗೊಂಡು ಭಗವಂತನನ್ನು ಹಾಡಿ, ಹಾರೈಸಿ, ಅರ್ಚಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಭಾರತಿ ನಾಟ್ಯಕಲಾ ಟ್ರಸ್ಟಿನ ವೈಷ್ಣವಿ ಕುಲಕರ್ಣಿ ತಂಡದ ಕಲಾವಿದರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಭಾವಸಾರ ಕ್ಷತ್ರಿಯ ಸಮಾಜದ ಮುಖಂಡರಾದ ಎಲ್. ಶೀಧರ ರಾವ್, ಯು.ರಮೇಶರಾವ್, ಎಸ್. ದುಗೋ೯ಜಿರಾವ್, ಎಲ್. ರಮೇಶ್ ರಾವ್, ಎಲ್. ವಿಠ್ಠಲ್ ರಾವ್, ಆರ್. ಶ್ರೀನಿವಾಸರಾವ್ ಇನ್ನು ಮುಂತಾದದವರು ಉಪಸ್ಥಿತರಿದ್ದರು.