ವಿಜಯನಗರ: ವಾಸವಿ ಜ್ಞಾನ ಪೀಠ ಪ್ರಥಮ ದರ್ಜೆ ಕಾಲೇಜಿನಲ್ಲಿ ಗ್ರಾಜುಯೇಷನ್ ಡೇ ಕಾರ್ಯಕ್ರಮ ಆಯೋಜಿಸಲಾಗಿತ್ತು.
ವಾಸವಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ.ಆರ್.ವಿಜಯಸಾರಥಿ, ಬೆಂಗಳೂರು ವಿಶ್ವವಿದ್ಯಾಲಯದ ರಿಜಿಸ್ಟಾರ್ ಡಾ||ಸಿ.ಎಸ್.ಕರಿಗಾರ್, ಪ್ರಾಂಶುಪಾಲರುಗಳಾದ ಪದ್ಮ ವಿ, ಡಾ||ರಂಗಸ್ವಾಮಿ ಬಿ.ವಿ. ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯದರ್ಶಿ ಡಿ.ಆರ್.ವಿಜಯಸಾರಥಿ ಮಾತನಾಡಿ, ಶಿಕ್ಷಣದಿಂದ ಮಕ್ಕಳು ವಂಚಿತರಾಗಬಾರದು, ಪ್ರತಿಯೊಬ್ಬ ಮಕ್ಕಳಿಗೆ ಶಿಕ್ಷಣ ದೊರೆಯಬೇಕು. ವಿದ್ಯಾವಂತ ಸಮಾಜ ಇದ್ದಾಗ ದೇಶಕ್ಕೆ ಗೌರವ. ಪದವಿ ಪೂರೈಸಿದವರಿಗೆ ಉದ್ಯೋಗ ಅವಕಾಶಕ್ಕಾಗಿ ನಮ್ಮಲ್ಲಿ ಉದ್ಯೋಗಮೇಳ ಆಯೋಜಿಸಿ, ನಿರುದ್ಯೋಗ ನಿವಾರಣೆಗಾಗಿ ನಮ್ಮ ಸಂಸ್ಥೆ ಶ್ರಮಿಸುತ್ತಿದೆ.
ಪ್ರತಿವರ್ಷ ನಡೆಯುವ ಉದ್ಯೋಗಮೇಳದಿಂದ ಇದುವರಗೆ 5000ಸಾವಿರಕ್ಕೂ ಹೆಚ್ಚು ಪದವಿ ಪೂರೈಸಿದರಿಗೆ ಪ್ರತಿಷ್ಟಿತ ಕಂಪನಿಗಳಲ್ಲಿ ಉದ್ಯೋಗ ಲಭಿಸಿದೆ ಎಂದರು.
ವಿದ್ಯಾಭ್ಯಾಸ ಪಡೆಯುವ ಹಕ್ಕು ನಿರಾಕರಿಸಲು ಸಾಧ್ಯವಿಲ್ಲ. ವಿದ್ಯೆಯನ್ನು ಯಾರು ಕದಿಯಲಾಗದು. ಆಸ್ತಿ, ಸಂಪತ್ತು ನಾಶವಾಗಬಹುದು. ನಾವು ಕಲಿತ ವಿದ್ಯೆ ಎಂದು ನಶಿಸುವುದಿಲ್ಲ ಎಂದು ಹೇಳಿದರು.
ರಿಜ್ಜಿಸ್ಟಾರ್ ಡಾ||ಸಿ.ಎಸ್.ಕರಿಗಾರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಕೌಶಲ್ಯ ಕಲಿಸಿದರ ಉದ್ಯೋಗ ಸಿಗುತ್ತದೆ. ಕ್ಯಾಂಪಸ್ ಸಂದರ್ಶನದಿಂದ ಕಾಲೇಜು ವಿದ್ಯಾಭ್ಯಾಸ ಮುಗಿಸಿದ ತಕ್ಷಣ ಉತ್ತಮ ಉದ್ಯೋಗ ಲಭಿಸಲಿದೆ. ಶಿಕ್ಷಣದಿಂದ ಉತ್ತಮ ಪ್ರಜೆಯಾಗಿ ಒಳ್ಳೆಯ ಜೀವನ ಸಾಗಿಸಬಹುದು. ಮಾದಕವಸ್ತು ಸೇವನೆ ಮಾಡಬೇಡಿ ಎಂದು ಹೇಳಿದರು.

350 ವಿದ್ಯಾರ್ಥಿ, ವಿದ್ಯಾರ್ಥಿಗಳಿಗೆ ಪದವಿ ಮತ್ತು ಮಾಸ್ಟರ್ ಪದವಿ ಪ್ರಮಾಣ ಪತ್ರ ವಿತರಿಸಲಾಯಿತು.