ವೇದಿಕೆಯ ಪ್ರಧಾನ ಸಂಚಾಲಕರು ಪ್ರೊ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ "ಬಲ್ಡೋಟಾ, ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದ-ಸುಮಿ, ಎಕ್ಸ್ ಇಂಡಿಯಾ ವಿಸ್ತರಣೆ ವಿರೋಧಿಸಿದ 1.5 ಲಕ್ಷ ಜನರ ಆತಂಕವನ್ನು ದೂರ ಮಾಡಲು ಮುಂದಾಗಬೇಕಾದ ಶಾಸಕರು, ಸಚಿವರು, ಮುಖ್ಯಮಂತ್ರಿಗಳ ಸಲಹೆಗಾರರು ಅಧಿವೇಶನದಲ್ಲಿ ಮೌನ ಮುರಿದು ವಿರೋಧ ಮಾಡುತ್ತಿಲ್ಲ. ಆದರೆ ಕೊಪ್ಪಳ ಮಾಧ್ಯಮ, ಹೋರಾಟಗಾರರು ಕೇಳಿದಾಗ ನಾವೇ ಮೊದಲು ವಿರೋಧ ಮಾಡುತ್ತೇವೆಎನ್ನುತ್ತಾರೆ. ಇವರ ನಿಲುವು ಅನುಮಾನಾಸ್ಪದವಾಗಿದ್ದು, ಜನರ ಆತಂಕ ಹೆಚ್ಚು ಮಾಡಿದೆ. ಆದ್ದರಿಂದ ಈ ಪ್ರತಿಭಟನೆಯನ್ನು ಬೆಳಗಾವಿ ಅಧಿವೇಶನದ ಮುಂದೆ ತೆಗೆದುಕೊಂಡು ಹೋಗುತ್ತೇವೆ. ಕೊಪ್ಪಳ ಜನರು ದಿ:16.12.2025ರಂದು ಮಂಗಳವಾರ ಬೆಳಗಾವಿ ಅಧಿವೇಶನ ಚಲೋ ನಡೆಸಲು ಕರೆ ಕೊಡಲಾಗಿದೆ"ಎಂದರು.

ಸತ್ಯಾಗ್ರಹದ 50ನೇ ದಿನ ದಿ: 19.12.2025ರಂದು ಬೃಹತ್ ಸಮಾವೇಶ ನಡೆಸಲಾಗುವುದು. ಅಂದು ಮುಖ್ಯ ಅತಿಥಿಗಳಾಗಿ ಬೆಂಗಳೂರು "ಪರಿಸರಕ್ಕಾಗಿ ನಾವು" ಚಳವಳಿಯ ಅಧ್ಯಕ್ಷರು ಎ.ಟಿ.ರಾಮಸ್ವಾಮಿ ಭಾಗವಹಿಸುತ್ತಾರೆ. ಇನ್ನು ಕೆಲವು ಪ್ರಖ್ಯಾತರು ಭಾಗವಹಿಸುತ್ತಿದ್ದು ನಗರ ಮತ್ತು ಬಾಧಿತ ಹಳ್ಳಿಗಳ ಜನ ಹೆಚ್ಚಿನ ಸಂಖ್ಯೆಯಲ್ಲಿ ಧರಣಿಗೆ ಆಗಮಿಸಬೇಕೆಂದು ಕೋರಲಾಗಿದೆ.
ಧರಣಿಯಲ್ಲಿ ಹಿರಿಯ ಸಾಹಿತಿ ಎಚ್.ಎಸ್.ಪಾಟೀಲ್, ಸಿ.ವಿ. ಜಡಿಯವರ, ಸಂಚಾಲಕಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ.ಗೊಂಡಬಾಳ, ಡಿ.ಎಂ.ಬಡಿಗೇರ್, ಎಸ್.ಬಿ.ರಾಜೂರು, ಶಂಭುಲಿಂಗಪ್ಪ ಹರಗೇರಿ, ಬಸವರಾಜ ಶೀಲವಂತರ, ಮಹಾಂತೇಶ ಕೊತಬಾಳ, ತಿಮ್ಮಣ್ಮ ಭೋವಿ ಬೆಂಕಿನಗರ, ಬಿ.ಜಿ.ಕರಿಗಾರ್, ವೈ.ಬಿ.ಶಾಂತಮ್ಮ, ಜಿ.ಬಿ.ಪಾಟೀಲ್, ಮಾರುತಿ ಮ್ಯಾಳಿ ಪಾಲ್ಗೊಂಡರು.