ನಾಯಕನಹಟ್ಟಿ : ಪ್ರಪ್ರಥಮ ಬಾರಿಗೆ ಶ್ರೀ ಕೊಟ್ಟೂರೇಶ್ವರ ಕಾಲೇಜು ಕೊಟ್ಟೂರು ಸಹಯೋಗದೊಂದಿಗೆ ಹಳೆ ವಿದ್ಯಾರ್ಥಿಗಳ ಸಂಘ, ಕೊಟ್ಟೂರೇಶ್ವರ ಕಾಲೇಜ್ ಇವರಿಂದ ಆ ಯೋಜನೆಗೊಂಡ ಪಲ್ಲವಿ ಸಂಗೀತ ಶ್ರುತಿ ಕರೋಕೆ ಗಾಯನದ ಫೈನಲ್ ಸಂಗೀತೋತ್ಸವ ಕಾರ್ಯಕ್ರಮ ಶಾಸಕ ನೇಮಿರಾಜ್ ನಾಯಕ ಇವರ ಅನುಪಸ್ಥಿತಿಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾಮಶೆಟ್ಟಿ ಕೊಟ್ರೇಶ್, ಅಧ್ಯಕ್ಷರು ಹಳೆ ವಿದ್ಯಾರ್ಥಿಗಳ ಸಂಘ ಇವರ ನೇತೃತ್ವದಲ್ಲಿ ಜರುಗಿತು.
ಸ್ಪರ್ಧೆಯಲ್ಲಿ ಆಯ್ಕೆಗೊಂಡಿದ್ದ ನಾಲ್ಕು ಜನ ಕಂಟೆಸ್ಟೆಂಟ್ ನಡುವೆ ಸ್ಪರ್ಧೆ ನಡೆಸಲಾಯಿತು. ದ್ವಿತೀಯ ಬಹುಮಾನ ಪಡೆದ ನಮ್ಮ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಹೋಬಳಿಯ ಮಲ್ಲೂರಹಳ್ಳಿ ಗ್ರಾಮದ ಟಿ.ಶಿವಕುಮಾರ್ ರೂ 5,000 ಆಕರ್ಷಕ ಟ್ರೋಫಿ ಪಡೆದು ರನ್ನರ್ ಅಪ್ ಆಗಿ ಹೊರಹೊಮ್ಮಿದರು .