ಚಳ್ಳಕೆರೆ : ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ನಗರದ ಪ್ರವಾಸಿ ಮಂದಿರದಲ್ಲಿ ಚಳ್ಳಕೆರೆ ರೈತ ಸಮೂಹ ಶುಕ್ರವಾರದಂದು ಕಬ್ಬು ಬೆಳೆದ ರೈತರಿಗೆ ಬೆಂಬಲ ಬೆಲೆ ಸಿಗದ ಹಿನ್ನೆಲೆ ಪತ್ರಿಕಾಗೋಷ್ಠಿ ನಡಸಿದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡ ಚಿಕ್ಕಣ್ಣ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ನಮ್ಮನ್ನಾಳುವ ಸರ್ಕಾರ ರೈತರನ್ನು ಹಿಮ್ಮೆಟ್ಟಿಸುವ ಕೆಲಸ ಮಾಡುತ್ತಿದೆ, ಈ ಹಿನ್ನಲೆ ಕರ್ನಾಟಕ ರಾಜ್ಯದಲ್ಲಿ ಲಕ್ಷಾಂತರ ರೈತರು ತಮ್ಮ ಸ್ವಂತ ಪರಿಶ್ರಮದಿಂದ ಕಬ್ಬು ಬೆಳೆದು ಬೆಂಬಲ ಬೆಲೆ ಸಿಗದೆ ನೇಣಿಗೆ ಶರಣಾಗುತ್ತಿದ್ದಾರೆ , ಈ ನಿಟ್ಟಿನಲ್ಲಿ ರೈತರು ಕಳ್ಳರಲ್ಲ ತಾವು ಬೆಳೆದಿರುವ ಕಬ್ಬನ್ನು ಬೆಂಬಲ ಬೆಲೆ ಸಿಗುವಂತೆ ಸರ್ಕಾರಕ್ಕೆ ಒತ್ತಡ ಹಾಕಿದ್ದೇವೆ ಹೊರತು ರೈತ ಶೋಕಿ ಮಾಡುತ್ತಿಲ್ಲ, ಇದು ಒಂದೆಡೆಯಾದರೆ ಇತ್ತ ರೈತ ಬೆಳೆದಿರುವ ಕಬ್ಬನ್ನು ಶುಗರ್ ಫ್ಯಾಕ್ಟರಿಗೆ ತೆಗೆದುಕೊಂಡು ಹೋದರೆ ಕನಿಷ್ಠ ರೀತಿಯ ಬೆಲೆ ಕೊಡುತ್ತಿಲ್ಲ ಶುಗರ್ ಫ್ಯಾಕ್ಟರಿ ಕಬ್ಬಿನಿಂದ ನಾನಾ ರೀತಿಯ ದ್ರವಗಳನ್ನು ತಯಾರಿಸಿ ಹೆಚ್ಚಿನ ಬೆಲೆಗೆ ಮಾರಿಕೊಳ್ಳುತ್ತಿದ್ದಾರೆ. ಇತ್ತ ರೈತನಿಗೆ ಕನಿಷ್ಠ ಬೆಲೆ ಸಿಗದೆ ರೈತ ನೇಣಿಗೆ ಶರಣಾಗುತ್ತಿದ್ದಾನೆ ಈ ನಿಟ್ಟಿನಲ್ಲಿ ನಮ್ಮನ್ನಾಳುವ ಸರ್ಕಾರಗಳು ಪ್ರತಿ ಟನ್ನಿಗೆ 3500 ರಿಂದ 3800 ಬೆಂಬಲ ಬೆಲೆ ನಿಗದಿಪಡಿಸಬೇಕು, ಇಲ್ಲದಿದ್ದರೆ ಸರಕಾರವೇ ಕಬ್ಬು ಖರೀದಿಸಿ ಶುಗರ್ ಫ್ಯಾಕ್ಟರಿಗೆ ಕೊಡಿ ಆದರೆ ರೈತರಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿ ರೈತರನ್ನು ಉಳಿಸಿ ಇಲ್ಲವಾದರೆ ಮುಂದಿನ ದಿನಗಳಲ್ಲಿ ಅತಿ ಉಗ್ರ ಸ್ವರೂಪದ ಪ್ರತಿಭಟನೆಯನ್ನು ಸರ್ಕಾರ ಎದುರಿಸಬೇಕಾಗುತ್ತದೆ ಎಂದರು,
ಈ ಸಂದರ್ಭದಲ್ಲಿ ತಾಲೂಕು ಪ್ರಧಾನ ಕಾರ್ಯದರ್ಶಿ ಪ್ರಕಾಶ್, ಖಾದರ್ ಭಾಷಾ, ಹೊನ್ನಪ್ಪ, ಶಂಕ್ರಪ್ಪ ,ಹನುಮಂತ ರಾಯ, ನರಸಿಂಹಮೂರ್ತಿ, ನಾಗಪ್ಪ, ಹೋಬಳೇಶ್, ಸೇರಿದಂತೆ ಅನೇಕ ರೈತ ಮುಖಂಡರು ಭಾಗಿಯಾಗಿದ್ದರು.