
ಇದಲ್ಲದೇ ಇದನ್ನು ನಗರಸಭೆಯ ಗಮನಕ್ಕೆ ತರದೇ, ಪರವಾನಗಿ ಇಲ್ಲದೇ ಇಲ್ಲಿ ಹಾಕಿದವರು ಯಾರು? ಅಥವಾ ಪರವಾನಗಿ ನೀಡುವಾಗ ಇದ್ಯಾವುದನ್ನು ನೋಡಿಲ್ಲವೆ, ನೋಡಿಯೂ ನೋಡದಂತಿರುವ ಅಧಿಕಾರಗಳ ನಡೆಯಿಂದ ಅನಾಧಿಕೃತವಾಗಿ ಈ ದ್ವಾರವನ್ನು ಇಲ್ಲಿ ಸ್ಥಾಪಿಸಲಾದೆಯೇ? ಈಗಾಗಲೇ ಕರ್ನಾಟಕದಲ್ಲಿ ಕನ್ನಡ ಭಾಷೆಯನ್ನು ಅಧಿಕೃತವಾಗಿ ಎಲ್ಲ ಕಡೆ ಬಳಸಬೇಕೆಂಬ ಹೈಕೋರ್ಟ್ ಆದೇಶವಿದ್ದಾಗಲೂ ಈ ಅಸಡ್ಡೆಯ ನಡೆ ಕನ್ನಡ ಪ್ರೇಮಿಗಳನ್ನು ಕೆರಳುವಂತೆ ಮಾಡಿದೆ. ಹಾಗಾಗಿ ಕೂಡಲೇ ನಗರಸಭೆ ಪದಾಧಿಕಾರಿಗಳು ಎಚ್ಚೆತ್ತು ಸ್ವಾಗತ ದ್ವಾರವನ್ನು ಪರಿಷ್ಕರಿಸಬೇಕು ಅಥವಾ ತೆರವುಗೊಳಿಸಬೇಕು. ಇಲ್ಲವಾದಲ್ಲಿ ಮುಂದಾಗುವ ಅನಾಹುತಗಳಿಗೆ ಅಧಿಕಾರಿಗಳು ಉತ್ತರಿಸಬೇಕಾಗುತ್ತದೆ ಎಂದು ಕನ್ನಡ ಪ್ರೇಮಿ ಸಂಘ ಮತ್ತು ಕಾರಂತ ರಂಗಲೋಕ ಸಂಸ್ಥೆಯ ಕಾರ್ಯದರ್ಶಿ ಆರ್.ಪಿ.ಮಂಜುನಾಥ್.ಬಿ.ಜಿ.ದಿನ್ನೆ ತಿಳಿಸಿದ್ದಾರೆ.
ಈಗಾಗಲೇ ನಮ್ಮ ಗಮನಕ್ಕೆ ಬಂದಿದ್ದು, ನಗರಸಭೆ ವ್ಯಾಪ್ತಿಗೆ ಬಂದರೆ ಕೂಡಲೇ ಕ್ರಮ ಕೈಗೊಳ್ಳುತ್ತೆವೆ. ಇಲ್ಲವೆ ಕನ್ನಡಪರ ಕೆಲಸವಾಗಿರುವುದರಿಂದ ಸಂಬಂಧಪಟ್ಟ ಗ್ರಾ.ಪಂ ಪಿಡಿಓ ಗೆ ತಿಳಿಸುತ್ತೇವೆ.
- ಗಂಗಾಧರ, ಪೌರಾಯುಕ್ತರು, ನಗರಸಭೆ, ಸಿರುಗುಪ್ಪ.
ಕನ್ನಡ ನಾಡು, ನುಡಿಯ ವಿಚಾರ ಬಂದಾಗ ಎಲ್ಲರೂ ಇರುವ ಎಲ್ಲಾ ಮೇರೆಗಳನ್ನು ಮೀರಿ ಕನ್ನಡ ಕಡೆಗಣಿಸುವವರ ವಿರುದ್ಧ ಧ್ವನಿ ಎತ್ತಬೇಕು. ಇಲ್ಲವಾದರೆ ಕನ್ನಡ ಉಳಿಯಲು, ಉಳಿಸಲು ಸಾಧ್ಯವಿಲ್ಲ.
-ಆರ್.ಪಿ.ಮಂಜುನಾಥ್.ಬಿ.ಜಿ.ದಿನ್ನೆ, ಕಾರ್ಯದರ್ಶಿ, ಕಾರಂತ ರಂಗಲೋಕ (ರಿ), ಭೈರಗಾಮದಿನ್ನೆ.