ಶ್ರೀಕೃಷ್ಣನು ವಿಷ್ಣುವಿನ ಎಂಟನೇ ಅವತಾರ ಎಂದು ಹಿಂದೂ ಧರ್ಮದಲ್ಲಿ ಭಕ್ತರು ನಂಬುತ್ತಾರೆ. ಅವನು ದೇವಕಿ ಮತ್ತು ವಸುದೇವನ ಮಗನಾಗಿ ಮಥುರೆಯ ಕಾರಾಗೃಹದಲ್ಲಿ ಜನಿಸಿದನು. ಅವನ ಜನ್ಮವು ಅಧರ್ಮವನ್ನು ನಾಶಮಾಡಿ ಧರ್ಮವನ್ನು ಸ್ಥಾಪಿಸಲು ಆಗಿದ್ದುದು ಎಂದು ಪುರಾಣಗಳಲ್ಲಿ ವಿವರಿಸಲಾಗಿದೆ. ಕೃಷ್ಣನು ತನ್ನ ಬಾಲ್ಯದ ಸಮಯದಲ್ಲಿ ಅನೇಕ ಅಸುರರನ್ನು ಸಂಹರಿಸಿದನು ಮತ್ತು ಗೋಕುಳದಲ್ಲಿ ಅನೇಕ ಲೀಲಾ (ವಿಚಿತ್ರ ಕ್ರಿಯೆಗಳು) ಪ್ರದರ್ಶಿಸಿ ಯಾದವ ಕುಲ ಭಾಂದವರನ್ನು ಕಾಪಾಡಿದನು.

ಜನ್ಮಾಷ್ಟಮಿ ದಿನ ಭಕ್ತರು ಉಪವಾಸವಿರುತ್ತಾರೆ, ಹರಿಕಥೆ, ಭಜನೆ ಮತ್ತು ಗೀತೆಗಳನ್ನು ಹಾಡುತ್ತಾರೆ. ರಾತ್ರಿ ನಿಶೀಥಕಾಲದಲ್ಲಿ ಕೃಷ್ಣನ ಜನ್ಮ ಸಮಯದ ವೇಳೆ ವಿಶೇಷ ಪೂಜೆ, ಅರ್ಚನೆ, ಆರತಿ ನಡೆಯುತ್ತದೆ. ಕೆಲವರು ತಮ್ಮ ಮನೆಯಲ್ಲಿ ಅಥವಾ ದೇವಸ್ಥಾನಗಳಲ್ಲಿ ಕೃಷ್ಣನನ್ನು ಉಯ್ಯಾಲೆಯಲ್ಲಿ ಇರಿಸಿ ಪೂಜೆ ಸಲ್ಲಿಸುತ್ತಾರೆ.
ಶ್ರೀಕೃಷ್ಣ ಜನ್ಮಾಷ್ಟಮಿಯಲ್ಲಿ ಮಕ್ಕಳನ್ನು ಬಾಲಕೃಷ್ಣನಂತೆ ಅಲಂಕರಿಸಲಾಗುವುದು. ಶಾಲೆಗಳಲ್ಲಿ, ಸಮಾಜಗಳಲ್ಲಿ ಮಕ್ಕಳಿಂದ ನೃತ್ಯ, ನಾಟಕ, ಕೃಷ್ಣ-ರಾಧೆ ಪಾತ್ರಧಾರಣೆಯ ಕಾರ್ಯಕ್ರಮಗಳು ಮನಮೋಹಕ ವಾಗಿತ್ತು.
ಭಕ್ತರ ನಂಬಿಕೆಯ ಪ್ರಕಾರ, ಕೃಷ್ಣನು ಸತ್ಯ, ಪ್ರೀತಿ, ಧರ್ಮ ಮತ್ತು ಶಕ್ತಿಯ ಪ್ರತೀಕ. ಜನ್ಮಾಷ್ಟಮಿ ಹಬ್ಬವು ಆಧ್ಯಾತ್ಮಿಕ ಶುದ್ಧತೆ, ದೇವದ ಪ್ರೇಮ ಮತ್ತು ಸಮಾಜದ ಒಗ್ಗಟ್ಟುಗಾಗಿ ಪ್ರೇರಣೆಯ ಮೂಲವಾಗಿರುತ್ತದೆ.
ಈ ರೀತಿ ಶ್ರೀಕೃಷ್ಣ ಜನ್ಮಾಷ್ಟಮಿ ಒಂದು ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಉತ್ಸವವಾಗಿದ್ದು, ಎಲ್ಲ ವಯಸ್ಸಿನ ಭಕ್ತರಲ್ಲಿ ಭಕ್ತಿ, ಸಂತೋಷ ಮತ್ತು ಶ್ರದ್ಧೆಯನ್ನು ಕಾಣಬಹುದು.
ಕಾರ್ಯಕ್ರಮದಲ್ಲಿ ಗೋವಿಂದಪ್ಪ ಗುತ್ತಿಗೆದಾರ ಸಂಘದ ಅಧ್ಯಕ್ಷರು, ರಾಮಪ್ಪ ನಿವೃತ್ತ ಶಿಕ್ಷಕರು, ರಮೇಶ್, ಸಂಘದ ಅಧ್ಯಕ್ಷರು ಮಲ್ಲಿಕಾರ್ಜುನ, ಹಿರಿಯ ಮುಖಂಡರು ಕೋಳಿ ರಾಜಣ್ಣ, ಎಸ್ ಟಿ ತಿಪ್ಪೇಸ್ವಾಮಿ, ಓಬಳೇಶಪ್ಪ, ಜಕಾತಿ ಮಾರಣ್ಣ, ಗೋವಿಂದಪ್ಪ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಈರಣ್ಣ, ಶಬ್ಬೀರ್, ಚಿದಾನಂದ ಬಂಡೆ ಮೇಲೆ ರಾಜು ಗೋಪಾಲ, ಬಾಲು, ಯರ್ರಣ್ಣ ಬಿಳಿಯಪ್ಪ, ಈಶ್ವರ, ಆಟೋ ಬಸಪ್ಪ, ದೇವರಪ್ಪ,ಚಿಕ್ಕಣ್ಣ ಹಾಗೂ ಯಾದವ್ ಸಮುದಾಯದ ಕುಲ ಭಾಂದವರು ಭಾಗವಹಿಸಿದ್ದರು.