ನಾಯಕನಹಟ್ಟಿ ಹೋಬಳಿ ಹಿಂದುಳಿದ ಪ್ರದೇಶವಾಗಿದ್ದು, ನಾಯಕನಹಟ್ಟಿ ಸುತ್ತ ಮುತ್ತ ತುಂಬಾ ಕಡುಬಡವರು ಇದ್ದು ಆರ್ಥಿಕ ಪರಿಸ್ಥಿತಿ ಇರುವುದರಿಂದ ಜೀವನ ಮಾಡಲು ಕಷ್ಷಪಡುವ ಸಮಯದಲ್ಲಿ ಸರ್ಕಾರಿ ಸೌಲಭ್ಯ ಪಡೆದುಕೊಳ್ಳಲು ಮಾಹಿತಿ ತಿಳಿದುಕೊಳ್ಳಲು ಬಂದಾಗ ನಾಯಕನಹಟ್ಟಿ ನಾಡಕಛೇರಿಯಲ್ಲಿ ಕಂದಾಯ ನಿರೀಕ್ಷಕರು ಇರುವುದಿಲ್ಲ ನಾಡಕಛೇರಿಯಿಂದ 1200 ಮೀಟರ್ ಇರುವ ಬಾಡಿಗೆ ರೂಮ್ನಲ್ಲಿ ಇರುವುದು ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ ಗಮನಕ್ಕೆ ಬಂದಿದೆ, ವೃದ್ದರು, ವಿಶೇಷ ಚೇತನರು, ವಿದ್ಯಾರ್ಥಿಗಳು, ಅವಿ ವಿದ್ಯಾವಂತರು, ರೈತರು ಪರದಾಡುವಂತಹ ಕೆಲಸವಾಗಿದೆ ಸರಿಯಾದ ಸಮಯಕ್ಕೆ ಸಿಗದೇ ವಾರಗಟ್ಟಲೇ ಕಛೇರಿಗೆ ಅಲಿದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಆದ್ದರಿಂದ ಕಂದಾಯ ನಿರೀಕ್ಷಕರು ಸರ್ಕಾರಿ ನೌಕರರು ಸರ್ಕಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸಬೇಕು ಬಾಡಿಗೆ ರೂಮ್ಗಳಲ್ಲಿ ಕಾರ್ಯನಿರ್ವಹಿಸಿವಂತಿಲ್ಲ ಆದ್ದರಿಂದ ಈ ದಿನ ತಮಗೆ ಮನವಿ ನೀಡುತ್ತೇವೆ ತಾವುಗಳು ಈ ಕ್ಷಣದಲ್ಲಿ ಕಂದಾಯ ನಿರೀಕ್ಷಕರನ್ನು ಕಛೇರಿಗೆ ಕರಿಸಿ ಕಛೇರಿಯಲ್ಲಿ ಕಾರ್ಯನಿರ್ವಹಿಸಲು ಸೂಚಿಸಬೇಕೆಂದು ಅಗ್ರಹಿಸಿದರು.

ಈ ಸಂಧರ್ಭದಲ್ಲಿ ಹೋಬಳಿ ಅಧ್ಯಕ್ಷ ಕೆ ಜಿ ಮಂಜಣ್ಣ, ತಾಲ್ಲೂಕು ಅಧ್ಯಕ್ಷ ಮುತ್ತಯ್ಯ, ನಗರ ಘಟಕ ಅಧ್ಯಕ್ಷ ತಿಪ್ಪೇಸ್ವಾಮಿ ಮಾತಾನಾಡಿದರು.
ಇದೇ ಸಂಧರ್ಭದಲ್ಲಿ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಶ್ರೀನಿವಾಸ, ಮಹಿಳಾ ಘಟಕ ಅಧ್ಯಕ್ಷೆ ತಿಪ್ಪಮ್ಮ ಚಿನ್ನಮಲ್ಲಯ್ಯ, ಉಪಾಧ್ಯಕ್ಷ ಕೆ ಪಿ ನಾಗರಾಜ್, ರಾಘವೇಂದ್ರ, ಮಂಜುನಾಥ, ಪ್ರಕಾಶ, ರಾಜು, ಮಲ್ಲಿಕಾರ್ಜುನ ಉಪಸ್ಥಿತಿತರು ಇದ್ದರು.