ನಾಯಕನಹಟ್ಟಿ : ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳು (ರಾಜ್ಯ ಹೆದ್ದಾರಿ-45) ಚಳ್ಳಕೆರೆ-ಅರಬಾವಿ ರಸ್ತೆ ಪಕ್ಕದಲ್ಲಿ ನಿರ್ಮಾಣವಾಗಿದ್ದು, ಈ ಮಳಿಗೆಗಳು ರಸ್ತೆ ಮಾರ್ಜಿನ್ ಬಿಡದೆ ಅಕ್ರಮವಾಗಿ ನಿರ್ಮಿಸಿದ್ದು, ಕಳಪೆ ಗುಣಮಟ್ಟದಲ್ಲಿ ನಿರ್ಮಾಣವಾಗಿದ್ದು, ಈ ಕೂಡಲೇ ಮಳಿಗೆಗಳನ್ನು ತೆರವುಗೊಳಿಸಬೇಕು ಹಾಗೂ ಈ ಮಳಿಗೆಗಳಿಗೆ ಸಂಬಂಧಪಟ್ಟ ದಾಖಲೆಗಳಾದ ಡಿ.ಪಿ.ಆರ್ ಹಾಗೂ ಎಸ್ಟಿಮೇಷನ್ ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನು ನೀಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಕುಮಾರ್ ಶೆಟ್ಟಿ ಬಣ)ದ ವತಿಯಿಂದ ಉಗ್ರವಾದ ಹೋರಾಟ ಮತ್ತು ಧರಣಿ ಸತ್ಯಗ್ರಹವನ್ನು ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಚಳ್ಳಕೆರೆ ತಾಲ್ಲೂಕು ಅಧ್ಯಕ್ಷರಾದ ಮಂಜುನಾಥ, ಗೌರವಾಧ್ಯಕ್ಷರಾದ ಬೋಜರಾಜ, ಮತ್ತು ನಾಯಕನಹಟ್ಟಿ ಹೋಬಳಿ ಘಟಕ ಅಧ್ಯಕ್ಷರಾದ ಬೋರಯ್ಯ, ಉಸ್ತುವಾರಿ ಅಧ್ಯಕ್ಷರಾದ ಓಂಕಾರಪ್ಪ, ಪ್ರಧಾನ ಕಾರ್ಯದರ್ಶಿಯಾದ ಸುರೇಶ್, ಉಪಾಧ್ಯಕ್ಷರಾದ ಕಾಟಮಲಿಂಗಯ್ಯ, ನಗರ ಘಟಕ ಅಧ್ಯಕ್ಷರಾದ ಉಮೇಶ್, ನಗರ ಉಪಾಧ್ಯಕ್ಷರಾದ ರಮೇಶ್, ಆಟೋ ಘಟಕ ಅಧ್ಯಕ್ಷರಾದ ತಿಪ್ಪೇಸ್ವಾಮಿ, ಉಪಾಧ್ಯಕ್ಷರಾದ ಮಂಜುನಾಥ, ಶಿವರಾಜ್, ಇನ್ನೂ ಮುಂತಾದ ಕರವೇ ಪದಾಧಿಕಾರಿಗಳ ಮುಖಾಂತರ ಚಳ್ಳಕೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿ ಸುರೇಶ್ರವರಿಗೆ ಮನವಿಯನ್ನು ಸಲ್ಲಿಸಿದರು.