LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕನಕದಾಸ ಪುತ್ಥಳಿ ನಿರ್ಮಾಣಕ್ಕೆ ಮನವಿ

ನಾಯಕನಹಟ್ಟಿ :  ನಾಯಕನಹಟ್ಟಿಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮುಭಾಂಗದಲ್ಲಿ "ಭಕ್ತ ಶ್ರೇಷ್ಠ ಕನಕದಾಸ ಪುತ್ತಳಿ ನಿರ್ಮಾಣ ಮಾಡಬೇಕೆಂದು ನಾಯಕನಹಟ್ಟಿ ಹೋಬಳಿಯ ಕುರುಬ ಸಮುದಾಯದ ಮುಖಂಡರು ಹಾಗೂ ಸಮಸ್ತ ನಾಗರಿಕರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಓ,ಶ್ರೀನಿವಾಸ್‌ರವರಿಗೆ ಮನವಿ ಮಾಡಿದರು.

 

16ನೇ ಶತಮಾನದ ಸಂತ ಕವಿ ತತ್ವಜ್ಞಾನಿ ಮತ್ತು ಸಮಾಜ ಸುಧಾರಕ ಜಾತಿ ಪದ್ದತಿಯ ವಿರುದ್ಧ ಹೋರಾಡಿದ ದಾಸ ಶ್ರೇಷ್ಟರಾದ ಭಕ್ತ ಕನಕದಾಸರು ನಮ್ಮ ನಾಡಿಗೆ ಕೊಟ್ಟ ಕೊಡುಗೆ ಅನನ್ಯವಾದದ್ದು. ಅವರ ತತ್ವ, ಆದರ್ಶ ಮತ್ತು ಸಾಹಿತ್ಯ ಸಾರ್ವಕಾಲಿಕ ಮೌಲ್ಯಗಳನ್ನು ಹೊಂದಿದೆ. ಸಮಾಜಕ್ಕೆ ಅವರ ಸಂದೇಶಗಳನ್ನು ಸ್ಮರಿಸುವ ಮತ್ತು ಗೌರವಿಸುವ ಉದ್ದೇಶದಿಂದ, ನಾಯಕನಹಟ್ಟಿಯ [ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮುಭಾಂಗದ] ಸ್ಥಳದಲ್ಲಿ ಭಕ್ತ ಶ್ರೇಷ್ಠ ಕನಕದಾಸರ ಪುತ್ಥಳಿಯನ್ನು ನಿರ್ಮಿಸಲು ನಾವು ನಿರ್ಧರಿಸಿದ್ದೇವೆ ಎಂದರು.

 

ಈ ಪುತ್ತಳಿಯ ನಿರ್ಮಾಣದಿಂದ ಆ ಸ್ಥಳಕ್ಕೆ ಒಂದು ಕಲಾತ್ಮಕ ಸೌಂದರ್ಯ ಬರಲಿದೆ ಮತ್ತು ಸಾರ್ವಜನಿಕರಿಗೆ ಕನಕದಾಸರ ಆದರ್ಶಗಳ ಬಗ್ಗೆ ಜಾಗೃತಿ ಮೂಡಿಸಲು ಸಹಕಾರಿಯಾಗಲಿದೆ. ವೃತ್ತ ನಿರ್ಮಾಣದ ಸಂಪೂರ್ಣ ವೆಚ್ಚವನ್ನು ನಮ್ಮ ಸಮುದಾಯ ಹಾಗೂ ಗ್ರಾಮದ ನಾಗರಿಕರ ಸಹಯೋಗದಿಂದ ಭರಿಸಲು ನಾವು ಸಿದ್ಧರಿದ್ದೇವೆ ಎಂದರು.



ಆದುದರಿಂದ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ಸ್ಥಳದ ಸೌಂದರ್ಯಕರಣದ ದೃಷ್ಟಿಯಿಂದ, ನಾವು ಪ್ರಸ್ತಾಪಿಸಿರುವ ಸ್ಥಳದಲ್ಲಿ ಅಥವಾ ತಾವುಗಳು ಸೂಚಿಸಿದ ಸ್ಥಳದಲ್ಲಿ "ಭಕ್ತ ಶ್ರೇಷ್ಠ ಕನಕದಾಸರ ಪುತ್ತಳಿಯನ್ನು ನಿರ್ಮಾಣ ಮಾಡಲು ದಯಮಾಡಿ ಅನುಮತಿ ನೀಡಿ, ನಮಗೆ ಸಹಕರಿಸಬೇಕೆಂದು ಮನವಿ ಮಾಡಿಕೊಂಡರು.

 

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ಅನ್ವರ್, ಕುರುಬ ಸಮಾಜದ ಮುಖಂಡರುಗಳು ಇದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST