ಅರಕೆರೆ: ದೇಶದ ಒಕ್ಕೂಟದ ವ್ಯವಸ್ಥೆಯಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕ ಸಾರ್ವಬೌಮತೆಯನ್ನು ಕಾಪಾಡಲು ಕಳೆದ 25 ವರ್ಷಗಳಿಂದಲೂ ದುಡಿಯುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆಯ ತತ್ವ ಸಿದ್ಧಾಂತ ನೀತಿ ನಿಯಮಗಳನ್ನು ಒಪ್ಪಿ ಹಲವಾರು ವರ್ಷಗಳಿಂದ ರಂಗಪ್ಪ ಗಾಲಿ ಆದ ನೀವು ಸಂಘಟನೆಯಲ್ಲಿ ಇದ್ದುಕೊಂಡು ಹಲವಾರು ಸಾಮಾಜಿಕ ಕೆಲಸಗಳನ್ನು ಮಾಡಿರುವುದು ತಿಳಿದು ಬಂದಿದ್ದು ಇದರ ಜೊತೆಗೆ ಈ ಹಿಂದೆ ನೀವು ಅರಕೇರಾ ಗ್ರಾಮ ಘಟಕದ ಉಪಾಧ್ಯಕ್ಷರಾಗಿ ಮತ್ತು ದೇವದುರ್ಗ ತಾಲೂಕಾ ಯುವ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ಈ ನಿಟ್ಟಿನಲ್ಲಿ ಟಿ.ಎ.ನಾರಾಯಣಗೌಡರು ಮಾರ್ಗದರ್ಶನದಂತೆ ಹಾಗೂ ಗಂಗಣ್ಣ ಡಿಶ್ ಜಿಲ್ಲಾಧ್ಯಕ್ಷರು ಇವರ ಆದೇಶದಂತೆ ನಿಮ್ಮನ್ನು ಅರಕೇರಾ ತಾಲೂಕಾ ಅಧ್ಯಕ್ಷರೆಂದು ನೇಮಕ ಮಾಡಲಾಗಿದೆ.
ಕನ್ನಡ ನೆಲ ಜಲ ಮತ್ತು ಭಾಷೆಗಾಗಿ ಸಂಘಟನಾತ್ಮಕವಾಗಿ ನಿಮಗೆ ನೀಡಿರುವ ಈ ಗುರುತರ ಜವಾಬ್ದಾರಿಯನ್ನು ಅತ್ಯಂತ ಶ್ರದ್ದೆ ಮತ್ತು ಪ್ರಾಮಾಣಿಕತೆಯಿಂದ ನಿರ್ವಹಿಸಿ ಅರಕೇರಾ ತಾಲೂಕಾ ಕರ್ನಾಟಕ ರಕ್ಷಣೆ ವೇದಿಕೆಯನ್ನು ಬಲಪಡಿಸಲು ಹಾಗೂ ನೀವು ನಿಮ್ಮ ಶಕ್ತಿ ಮೀರಿ ದುಡಿಯುತ್ತೀರಿ ಎಂದು ಆಶಾ ಬಾವನೆಯಿಂದ ನಿಮ್ಮನ್ನು ಅರಕೇರಾ ತಾಲೂಕಾಧ್ಯಕ್ಷರು ಎಂದು ಆದೇಶ ಪತ್ರವನ್ನು ನೀಡಲಾಗಿದೆ
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದಶಿ ರಾಮಕೃಷ್ಣ ಭಜಂತ್ರಿ ಜಿಲ್ಲಾ ಉಪ ಅಧ್ಯಕ್ಷರು ದೇವೇಂದ್ರ ಗೌಡ
ಕರವೇಯ ವಿವಿಧ ತಾಲೂಕ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು , ಮುಖಂಡರು ಕಾರ್ಯಕರ್ತರು ಇದ್ದರು