ರಾಜ್ಯದ ಗುತ್ತಿಗೆದಾರರಿಗೆ ವಿವಿಧ ಇಲಾಖೆಗಳಿಂದ ಕಳೆದ ಮೂರು ವರ್ಷದಿಂದ ಪೆಂಡಿಂಗ್ ಬಿಲ್ 37,000 ಕೋಟಿ ರೂ. ಬಾಕಿ ಇದೆ. ನಮಗೆ ದುಡ್ಡಿನ ಸಮಸ್ಯೆ ಇದೆ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಮುಖ್ಯಮಂತ್ರಿಗಳು ನಮ್ಮ ಮೇಲೆ ಅನುಕಂಪ ತೋರಿಸುತ್ತಿಲ್ಲ. ಗುತ್ತಿಗೆದಾರರು ಮನೆಯ ಒಡವೆ ಹಣ ಎಲ್ಲಾ ಅಡ ಇಟ್ಟಿದ್ದೇವೆ ನಮ್ಮ ಸಂಕಷ್ಟಕ್ಕೆ ಸ್ಪಂದಿಸದಿದ್ದರೆ ಹೇಗೆ.
ಒಂದು ವೇಳೆ ಬಿಡುಗಡೆ ಮಾಡದೇ ಇದ್ದರೆ, ನಮ್ಮ ಸಂಘದಿಂದ ಮಾರ್ಚ್ 6 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಮುಷ್ಕರ ಮಾಡುತ್ತೇವೆ ಇಲ್ಲಿ 25-30 ಸಾವಿರ ಜನ ಗುತ್ತಿಗೆದಾರರು ಸೇರಿ ಮುಷ್ಕರ ಮಾಡುತ್ತೇವೆಂದರು.

ಕೆಲಸ ಮಾಡಿ ಬಾಕಿ ಹಣಕ್ಕಾಗಿ 31 ಜಿಲ್ಲೆಗಳ ಗುತ್ತಿಗೆದಾರರು ಕಾಯುವಂತಾಗಿದೆ. ಎಲ್ಲರಿಗೆ ವಿಷ ಕುಡಿಯುವ ಪರಿಸ್ಥಿತಿ ಬಂದಿದೆ. ಈ ಬಗ್ಗೆ ಚರ್ಚೆ ಮಾಡಲು ಮೂರು ಬಾರಿ ಸಮಯಕೇಳಿದರೂ ಸಿಎಂ ಸಿದ್ದರಾಮಯ್ಯ ಅವರು ನಮಗೆ ಸಮಯ ನೀಡಿಲ್ಲ
ಸಚಿವ ಸತೀಶ್ ಜಾರಕಿಹೊಳಿ ಇದ್ದುದರಲ್ಲಿ ಉತ್ತಮ ನಮಗೆ ಸ್ಪಂದನೆ ಮಾಡುತ್ತಾರೆ. ಡಿಕೆ ಶಿವಕುಮಾರ್ ರವರಿಂದ ಯಾವುದೇ ಭರವಸೆಯ ಮಾತು ಬರುತ್ತಿಲ್ಲ
ಹಳೆ ಸರ್ಕಾರಕ್ಕಿಂತ ಈ ಸರ್ಕಾರದಲ್ಲಿ ಬಾಕಿ ಹಣ ಹೆಚ್ಚಿಗೆ ಆಗಿದೆ. ಗುತ್ತಿಗೆದಾರರು ಬಹಳ ಕಷ್ಟದಲ್ಲಿ ಇದ್ದಾರೆ, ದಯಮಾಡಿ ರಾಜ್ಯ ಸರ್ಕಾರ ಬಾಕಿ ಹಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಸಂಘದ ಜಿಲ್ಲಾ ಅಧ್ಯಕ್ಷ ಎಸ್.ಜಿ.ರಮಣರೆಡ್ಡಿ (ರವಿ) ರಾಜ್ಯ ಸಂಘಟನಾ ಕಾರ್ಯದರ್ಶಿ ಜಿ. ಉಮಾಮಹೇಶ್ವರಗೌಡ ಮೊದಲಾದವರು ಇದ್ದರು.