ಮರಿಯಮ್ಮನಹಳ್ಳಿ: ಈಡಿಗರಸಮಾಜವನ್ನು ರಾಜ್ಯಸರ್ಕಾರ ಕಡೆಗಣಿಸುವುದರಿಂದ ರಾಜ್ಯಸರ್ಕಾರದ ವಿರುದ್ದ ಕಲಬುರಗಿ ಜಿಲ್ಲೆ ಕರದಾಳದ ಬ್ರಹ್ಮಶ್ರೀ ನಾರಾಯಣಗುರು ಶಕ್ತಪೀಠದಿಂದ ಜನೇವರೆ 6ರಿಂದ ಆರಂಭಗೊಂಡ ಸುಮಾರು 41ದಿನಗಳ 700ಕಿ.ಮೀ.ದೂರದ ಬೆಂಗಳೂರಿನ ಫ್ರೀಡಂಪಾರ್ಕಿನಲ್ಲಿ ಸಮಾಜದ ಶಕ್ತಿಪ್ರದರ್ಶನ ಹಾಗ ಸಮಾಜದ 18ಬೇಡಿಕೆಗಳ ಈಡೇರಿಕೆಗಾಗಿ ಆಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಕಲಬುರ್ಗಿ ಜಿಲ್ಲೆ ಕರದಾಳದ ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಡಾ. ಪ್ರಣವಾನಂದ ಸ್ವಾಮೀಜಿ ಹೇಳಿದರು.
ಪಟ್ಟಣಕ್ಕೆ ಭಾನುವಾರ ಆಗಮಿಸಿದ ಪಾದಯಾತ್ರೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಹಾಲಿ ಸರ್ಕಾರದಲ್ಲಿರುವ ಸಮಾಜದ ಓರ್ವ ಸಚಿವ, 6ಜನ ಶಾಸಕರು, ಇಬ್ಬರು ವಿಧಾನಪರಿಷತ್ ಸದಸ್ಯರು ಸಮಾಜದ ಬೇಡಿಕೆಗಳ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ಪರಿಹರಿಸಿಕೊಡಲು ಮುಂದಾಗಬೇಕು. ಇಲ್ಲವಾದರೇ ತಮ್ಮ ತಮ್ಮ ಕ್ಷೇತ್ರಗಳಲ್ಲಿಯೂ ಸಮಾಜದಿಂದ ಪಾದಯಾತ್ರೆಯನ್ನು ಮುಂದುವರೆಸಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.