ನಗರದ ಹಿರಿಯ ಸಂತರಾದ ಡಾ.ಎಸ್.ಎನ್.ಶಾಸ್ತ್ರಿ ವಿ.ಲಕ್ಷ್ಮಣರಾವ್, ಎಸ್.ವಿಶ್ವನಾಥ ಶಾಸ್ತ್ರಿ ವಿ.ನಲ್ಲಾರೆಡ್ಡಿ ಮತ್ತು ವಿ.ಪಾಂಡುರಂಗ ಹಾಗೂ ಇತರೆ ಎಲ್ಲ ಸಂತರ ಸಂಕಲ್ಪದಂತೆ ಕಳೆದ 8 ವರ್ಷಗಳಿಂದಲೂ ಅತ್ಯಂತ ಶ್ರದ್ಧಾಭಕ್ತಿಯಿಂದ ಶ್ರಾವಣ ಮಾಸದಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ಶ್ರೀ ವಿಶ್ವಾವಸು ನಾಮ ಸಂವತ್ಸರದ ಅಂಗವಾಗಿ ಜು.25ರಂದು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಪೋತಿ ಸ್ಥಾಪನೆ, ಸಂಜೆ 4-30ರಿಂದ ಪ್ರವಚನ ಮತ್ತು ನಾಮ ಜಪ, ರಾತ್ರಿ 7 ರಿಂದ 9 ಗಂಟೆಯವರೆಗೆ ಕನ್ನಡದಲ್ಲಿ ಕೀರ್ತನೆ ನಡೆಯಲಿದೆ.

ಜು.26 ಶನಿವಾರದಂದು ಬೆಳಿಗ್ಗೆ 5 ರಿಂದ 6 ಗಂಟೆಯವರೆಗೆ ಕಾಕಡ ಆರತಿ, ಬೆಳಿಗ್ಗೆ 7-30ರಿಂದ ಶ್ರೀ ಜ್ಞಾನೇಶ್ವರಿಯ 9 ಮತ್ತು 12ನೇ ಅಧ್ಯಾಯದ ಸಾಮೂಹಿಕ ಪಾರಾಯಣ, ಬೆ.11ರಿಂದ ಮಧ್ಯಾಹ್ನ 1ಗಂಟೆಯವರೆಗೆ ಭಜನೆ, ಸಂಜೆ 4-30ರಿಂದ 6 ಗಂಟೆಯವರೆಗೆ ಪ್ರವಚನ ಮತ್ತು ನಾಮ ಜಪ, ರಾತ್ರಿ 7 ರಿಂದ 8 ಗಂಟೆಯವರೆಗೆ ಕೀರ್ತನೆ, ಜು.27ರಂದು ಭಾನುವಾರ ಬೆಳಿಗ್ಗೆ 5 ರಿಂದ 6 ಗಂಟೆಯವರೆಗೆ ಕಾಕಡ ಆರತಿ, ಬೆಳಿಗ್ಗೆ 9 ಗಂಟೆಯಿಂದ ಶ್ರೀ ಪಾಂಡುರಂಗಸ್ವಾಮಿ ಮತ್ತು ರುಕ್ಮಿಣಿ ದೇವಿಯ ಮೂರ್ತಿಗಳ ಭವ್ಯ ಮೆರವಣಿಗೆಯೊಂದಿಗೆ ನಗರ ಪ್ರದಕ್ಷಿಣೆ, ದಿಂಡಿ ಮಹೋತ್ಸವ, ಬಳಿಕ ಮಹಾಮಂಗಳಾರತಿ ಜರುಗಲಿದೆ. ಮಧ್ಯಾಹ್ನ 12ಗಂಟೆಯಿಂದ ಸಂತರ ಸಮಾರಾಧನೆ ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ.