LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News Districts

ವಿಜಯನಗರ ಜಿಲ್ಲೆಯ ಡಣಾಯಕನಕೆರೆ ಮೇಲೆ ಮತ್ತೆ ಬೊಂಗ

ಮರಿಯಮ್ಮನಹಳ್ಳಿ: ಬಾರಿ ಮಳೆಯಿಂದ ವಿಜಯನಗರ ಜಿಲ್ಲೆಯ ಅತಿದೊಡ್ಡ ಕೆರೆ ಆದ ಡಣಾಯಕನಕೆರೆ  ಏರಿ ಮೇಲಿನ ಕನ್ನೇರಮ್ಮ ದೇವಿ ದೇವಸ್ಥಾನದ ಪಕ್ಕದಲ್ಲಿ ಕೆರೆಗೆ ಶುಕ್ರವಾರ ಬೊಂಗ ಬಿದ್ದಿದೆ. ಡಣಾಯಕನಕೆರೆ ಗ್ರಾ.ಪಂ.ಅಧ್ಯಕ್ಷೆ ಲಕ್ಷ್ಮೀ ನಾಗರಾಜ್ ಮತ್ತು ಗ್ರಾಮದ ಮುಖಂಡರು ಸಣ್ಣ ನೀರಾವರಿ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅಧಿಕಾರಿಗಳ ಆದೇಶದ ಮೇರೆಗೆ ಸಣ್ಣ ನೀರಾವರಿ ಇಲಾಖೆ ಗುತ್ತಿಗೆದಾರ ಸುಂಕೇಶ ಪಾಟೀಲ್ ಸ್ಥಳಕ್ಕೆ ಬಂದಿದ್ದು, ಮರಳಿನ ಚೀಲ ಹಾಗೂ ಮಣ್ಣಿನಿಂದ ಬೊಂಗ ಮುಚ್ಚುವ ಕಾರ್ಯದಲ್ಲಿ ತೊಡಗಿದರು.



ಅದೇ ಜಾಗದಲ್ಲಿ ಬೊಂಗ: 2023ರಲ್ಲಿ ಇದೇ ರೀತಿ ಇದೇ ಜಾಗದಲ್ಲಿ ಬೊಂಗ ಬಿದ್ದಿತ್ತು, ಆಗ ಸಚಿವರಾಗಿದ್ದ ಶಶಿಕಲಾ ಜೊಲ್ಲೆ, ಸಂಸದ ದೇವೇಂದ್ರಪ್ಪ ಮತ್ತು ಹೊಸಪೇಟೆ ಸಹಾಯಕ ಕಮೀಷನರ್ ಸಿದ್ದರಾಮೇಶ್ವರ ಅವರು ಸ್ಥಳಕ್ಕೆ ಭೇಟಿ ನೀಡಿ ಬೊಂಗ ವೀಕ್ಷಣೆ ಮಾಡಿ, ಅದಕ್ಕೆ ಶಾಶ್ವತ ಪರಿಹಾರ ನೀಡುವುದಾಗಿ ತಿಳಿಸಿದ್ದರು. ಕೊನೆಗೆ ಮರಳಿನ ಚೀಲ ಮತ್ತು ಮಣ್ಣು ಹಾಕಿ ಮುಚ್ಚಲಾಗಿತ್ತು. ಅದಾದ ಬಳಿಕ ಇತ್ತ ಯಾವ ಜನಪ್ರತಿನಿಧಿಯಾಗಲಿ, ಅಧಿಕಾರಿಗಳಾಲಿ ತಲೆಯಾಕಿರಲಿಲ್ಲ. ಶುಕ್ರವಾರ ಈ ಹಿಂದೆ ಬೊಂಗ ಬಿದ್ದಿದ್ದ ಜಾಗದಲ್ಲಿ ಮತ್ತೇ ಅದಕ್ಕೂ ದೊಡ್ಡದಾಗಿ ಬೊಂಗ ಬಿದ್ದಿದ್ದು, ಏನಾದರೂ ಅನಾಹುತ ಸಂಭವಿಸುವ ಮುಂಚೆಯೇ ಅಧಿಕಾರಿಗಳು ಶಾಶ್ವತ ಪರಿಹಾರ ನೀಡಲಿ ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.



ಈ ಸಂದರ್ಭದಲ್ಲಿ ಡಣಾಯಕನಕೆರೆ ಗ್ರಾಮದ ಗ್ರಾಮಸ್ಥರಾದ ನಾಗರಾಜ, ಶೇಷಪ್ಪ, ಕೊಮಾರೆಪ್ಪ, ಅಂಬಳಿ ಪ್ರಶಾಂತ, ಗಂಗಪ್ಪ, ಅಂಜಿನಪ್ಪ, ಗಾಳೆಪ್ಪ, ಹನುಮಂತ, ಬಣಕಾರ ಪ್ರಕಾಶ, ತಳವಾರ ಅಂಜಿನಪ್ಪ, ಅಕಾರಿ ಅಂಜಿನಪ್ಪ, ಶೇಷಾವಲಿ, ನೀರಗಂಟಿ ಸಿಕಂದರ್, ಪಟ್ಟಣದ ಪಿಎಸ್.ಐ.ತಾರಬಾಯಿ ಇತರರಿದ್ದರು.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ