ಬಾಸ್ಕರ್ ಪ್ರಸಾದ್ ವಿರುದ್ಧ ಕಿಡಿಕಾರಿದ ಓ.ಶಂಕರ್
ಚಿತ್ರದುರ್ಗ : ಒಳ ಮೀಸಲಾತಿ ಹೋರಾಟಕ್ಕೆ ಅದೆಷ್ಟೋ ಜನರ ಶ್ರಮವಿದೆ. ಮುಖ್ಯಮಂತ್ರಿಗಳು ಹಾಗೂ ದಲಿತ ಮಂತ್ರಿಗಳ ವಿರುದ್ಧವಾಗಿ ಮಾತನಾಡುವುದನ್ನು ಭಾಸ್ಕರ್ ಪ್ರಸಾದ್ ನಿಲ್ಲಿಸಬೇಕು ಇಲ್ಲದಿದ್ದರೆ ತಕ್ಕ ಪಾಠವನ್ನು ಕಲಿಸಲಾಗುತ್ತದೆ ಎಂದು ಲೀಡ್ಕರ್ ನ ಮಾಜಿ ಅಧ್ಯಕ್ಷ ಓ ಶಂಕರ್ ಅವರು ಎಚ್ಚರಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಭಾಸ್ಕರ್ ಪ್ರಸಾದ್ ಹುಚ್ಚನಂತೆ ಸೋಶಿಯಲ್ ಮೀಡಿಯಾಗಳಲ್ಲಿ ಬಾಯಿಗೆ ಬಂದ ರೀತಿ ಮುಖ್ಯಮಂತ್ರಿಗಳನ್ನ ಸೇರಿದಂತೆ ಹಾಲಿ ಸಚಿವರನ್ನ ಹಾಗೂ ಮಾಜಿ ಸಚಿವರನ್ನ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಹೋರಾಟ ಮಾಡುತ್ತೇನೆ ಎಂದು ಜನಗಳ ಬಳಿ ಫೋನ್ ಪೇ ಗೂಗಲ್ ಪೇ ಮೂಲಕ ಹಣಗಳನ್ನು ಪಡೆದು ಮುಗ್ಧ ಮಾದಿಗ ಸಮುದಾಯದ ಜನರಿಗೆ ಮೋಸ ಮಾಡುತ್ತಿದ್ದಾನೆ, ಹೋರಾಟದ ನೆಪದಲ್ಲಿ ಅಧಿಕಾರಿಗಳ ಬಳಿ ಹಣಗಳನ್ನ ತೆಗೆದುಕೊಂಡು ವಂಚಿಸುತ್ತಿದ್ದಾನೆ ಎಂದು ಆರೋಪಿಸಿದ್ದಾರೆ.
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.