ನಂತರ ಮಾತನಾಡಿ, 2028ಕ್ಕೆ ಕುಮಾರಣ್ಣ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಅಭಿವೃದ್ದಿ ಪರ್ವಕ್ಕೆ ನಾಂದಿ ಹಾಡಲಿದ್ದಾರೆ. ಇದು ಸೂರ್ಯ ಚಂದಿರ ರಷ್ಟೇ ಸತ್ಯ. ಈ ನಿಟ್ಟಿನಲ್ಲಿ ರಾಜ್ಯದ ಜೆಡಿಎಸ್ ಶಾಸಕರು, ಹಿರಿಯರು, ಬುದ್ದಿ ಜೀವಿಗಳು ಕುಮಾರಣ್ಣ ರಾಜ್ಯಕ್ಕೆ ಮರಳುವಂತೆ ಮನ ಒಲಿಸಲಾಗುವುದು ಎಂದರು.

ಕ್ಷೇತ್ರವನ್ನು ನೀರಾವರಿ ಪ್ರದೇಶವನ್ನಾಗಿ ಮಾಡುವ ಮೂಲಕ ಕೃಷಿಗೆ ಹೆಚ್ಚು ಒತ್ತು ಕೊಡಲು ರಾಜ್ಯ ಸರಕಾರ 17 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 50:50 ಅಥವಾ 60:40 ಯಾವುದೇ ಅನುಪಾತದಲ್ಲಿ ಅನುದಾನ ಕೊಟ್ಟರೂ ಉಳಿದ ಅನುದಾನವನ್ನು ಕೇಂದ್ರ ಸರಕಾರದಿಂದ ತರುತ್ತೇವೆ. ಆದರೆ ರಾಜ್ಯ ಸರಕಾರ ಆಲಸ್ಯ ತೋರುತ್ತಿದೆ. 17 ಕೆರೆಗಳೆಂದರೂ ಒಂದೊಂದು ಕೆರೆಗೂ 4 ಉಪಕೆರೆಗಳಿವೆ ಇದರಿಂದ ಕನಿಷ್ಠ 68 ಕೆರೆಗಳಿಗೆ ನೀರು ತುಂಬಿಸಿದಂತಾಗುತ್ತಿದ್ದು ಕೃಷಿಗೆ ಹೆಚ್ಚು ಒತ್ತು ಕೊಟ್ಟಂತಾಗುತ್ತದೆ ಇದಕ್ಕೆ ಸರಕಾರ ಬೇಗ ಸ್ಪಂದಿಸ ಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಪ.ಪಂ.ಅಧ್ಯಕ್ಷ ಹುಸೇನ್ ಬಾಷ, ಮುಖ್ಯಾಧಿಕಾರಿ ಗರಡಿ ಕಳಕ ಮಲ್ಲೇಶ, ಪ.ಪಂ.ಸದಸ್ಯರಾದ ಮರಡಿ ಸುರೇಶ, ಬಿಎಂಎಸ್ ರಾಜೀವ್, ಮಹಮದ್, ಜೆಡಿಎಸ್ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ, ಮುಖಂಡರಾದ ಪಾಂಡುರಂಗ ಶೆಟ್ಟಿ, ಬಿ ಸುರೇಶ, ರೋಗಾಣಿ ಮಂಜುನಾಥ, ನಂದೀಶ, ಖಡ್ತರ್ ರಾಜಾಭಕ್ಷಿ, ಬಾಪುರಿ ಅಂಜಿನಿ, ರಾಘವೇಂದ್ರ, ದುರುಗಪ್ಪ, ಸುರೇಶ್ ಇತರರಿದ್ದರು.