LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನೂತನ ಪಟ್ಟಣ ಪಂಚಾಯಿತಿ ಕಟ್ಟಡಕ್ಕೆ ನೇಮಿರಾಜ್ ನಾಯ್ಕ ಶಂಕುಸ್ಥಾಪನೆ

ಮರಿಯಮ್ಮನಹಳ್ಳಿ:  ಪಟ್ಟಣದಲ್ಲಿ 2022-23 ನೇ ಸಾಲಿನ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಹಂತ- 4 ರಲ್ಲಿ ಮಂಜೂರಾದ 210.50 ಲಕ್ಷದಲ್ಲಿ  ನೂತನ ಪಟ್ಟಣ ಪಂಚಾಯಿತಿ ಕಟ್ಟಡ  ಹಾಗೂ ಮರಿಯಮ್ಮನಹಳ್ಳಿ ತಾಂಡದ ಗ್ರಂಥಾಲಯ ನಿರ್ಮಾಣದ ಕಾಮಾಗಾರಿಗೆ ಹಗರಿಬೊಮ್ಮನಹಳ್ಳಿ ಶಾಸಕ ಕೆ ನೇಮಿರಾಜ್ ನಾಯ್ಕ ಶಂಕುಸ್ಥಾಪನೆ ನೆರವೇರಿಸಿದರು.

ನಂತರ ಮಾತನಾಡಿ, 2028ಕ್ಕೆ ಕುಮಾರಣ್ಣ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಅಭಿವೃದ್ದಿ ಪರ್ವಕ್ಕೆ ನಾಂದಿ ಹಾಡಲಿದ್ದಾರೆ. ಇದು ಸೂರ್ಯ ಚಂದಿರ ರಷ್ಟೇ ಸತ್ಯ. ಈ ನಿಟ್ಟಿನಲ್ಲಿ ರಾಜ್ಯದ ಜೆಡಿಎಸ್ ಶಾಸಕರು, ಹಿರಿಯರು, ಬುದ್ದಿ ಜೀವಿಗಳು ಕುಮಾರಣ್ಣ ರಾಜ್ಯಕ್ಕೆ ಮರಳುವಂತೆ ಮನ ಒಲಿಸಲಾಗುವುದು ಎಂದರು.



ಕ್ಷೇತ್ರವನ್ನು  ನೀರಾವರಿ ಪ್ರದೇಶವನ್ನಾಗಿ ಮಾಡುವ ಮೂಲಕ ಕೃಷಿಗೆ ಹೆಚ್ಚು ಒತ್ತು ಕೊಡಲು ರಾಜ್ಯ ಸರಕಾರ 17 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 50:50 ಅಥವಾ 60:40 ಯಾವುದೇ ಅನುಪಾತದಲ್ಲಿ ಅನುದಾನ ಕೊಟ್ಟರೂ ಉಳಿದ ಅನುದಾನವನ್ನು ಕೇಂದ್ರ ಸರಕಾರದಿಂದ ತರುತ್ತೇವೆ. ಆದರೆ ರಾಜ್ಯ ಸರಕಾರ ಆಲಸ್ಯ ತೋರುತ್ತಿದೆ. 17 ಕೆರೆಗಳೆಂದರೂ ಒಂದೊಂದು ಕೆರೆಗೂ 4 ಉಪಕೆರೆಗಳಿವೆ ಇದರಿಂದ ಕನಿಷ್ಠ 68  ಕೆರೆಗಳಿಗೆ ನೀರು ತುಂಬಿಸಿದಂತಾಗುತ್ತಿದ್ದು ಕೃಷಿಗೆ ಹೆಚ್ಚು ಒತ್ತು ಕೊಟ್ಟಂತಾಗುತ್ತದೆ ಇದಕ್ಕೆ ಸರಕಾರ ಬೇಗ ಸ್ಪಂದಿಸ ಬೇಕಾಗಿದೆ ಎಂದರು.

 

ಈ ಸಂದರ್ಭದಲ್ಲಿ ಪ.ಪಂ.ಅಧ್ಯಕ್ಷ ಹುಸೇನ್ ಬಾಷ, ಮುಖ್ಯಾಧಿಕಾರಿ ಗರಡಿ ಕಳಕ ಮಲ್ಲೇಶ, ಪ.ಪಂ.ಸದಸ್ಯರಾದ ಮರಡಿ ಸುರೇಶ, ಬಿಎಂಎಸ್ ರಾಜೀವ್, ಮಹಮದ್, ಜೆಡಿಎಸ್ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ, ಮುಖಂಡರಾದ ಪಾಂಡುರಂಗ ಶೆಟ್ಟಿ, ಬಿ ಸುರೇಶ, ರೋಗಾಣಿ ಮಂಜುನಾಥ, ನಂದೀಶ, ಖಡ್ತರ್ ರಾಜಾಭಕ್ಷಿ, ಬಾಪುರಿ ಅಂಜಿನಿ, ರಾಘವೇಂದ್ರ, ದುರುಗಪ್ಪ, ಸುರೇಶ್ ಇತರರಿದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST