ಪ್ರತಿ ವರ್ಷ ಶ್ರಾವಣ ಮಾಸದ ಕೊನೆಯ ಸೋಮವಾರ ಜರುಗುವ ಈ ರಥೋತ್ಸವಕ್ಕೆ ತಾಲೂಕಿನ ಸುತ್ತು ಹತ್ತು ಹಳ್ಳಿಗಳ ಭಕ್ತರು ಮತ್ತು ವಿಜಯನಗರ, ಬಳ್ಳಾರಿ, ಗದಗ ಜಿಲ್ಲೆಯ ಭಕ್ತರು ಪಾಲ್ಗೊಳ್ಳುವರು. ಜಾತ್ರೆಯ ಪ್ರಯುಕ್ತ ಇಂದು ಪ್ರಾತ:ಕಾಲದಿಂದ ದೇವಸ್ಥಾನದಲ್ಲಿ ಪೂಜೆ ರುದ್ರಾಭಿಷೇಕ,ಧೀರ್ಘ ದಂಡ ನಮಸ್ಕಾರ ಇತ್ಯಾದಿ ಕಾರ್ಯಕ್ರಮ ಜರುಗಿದವು. ಜಾತ್ರೆಗೆ ಆಗಮಿಸಿದ ಭಕ್ತರೆಲ್ಲರಿಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಆಗಷ್ಟ್ 14 ರಿಂದ ಆರಂಭವಾದ ಜಾತ್ರೆಯ ಧಾರ್ಮಿಕ ವಿಧಿ ವಿಧಾನಗಳು, ಆ. 19 ರ ಮಂಗಳವಾರ ಸಾಯಂಕಾಲ ಭಕ್ತ ಹಿತ ಚಿಂತನ ಸಭೆ ಮತ್ತು ಸಂಗೀತ ಕಾರ್ಯಕ್ರಮ, ರಾತ್ರಿ ಮದ್ದು ಸುಡುವುದರ ಮುಖಾಂತರ ಜಾತ್ರೆ ಸಂಪನ್ನವಾಗುವುದೆಂದು, ಹ್ಯಾಟಿ- ಮುಂಡರಗಿ, ಮೆಳ್ಳಿಕೇರಿ ಹಾಗು ಲಾಚನಕೇರಿ ಗ್ರಾಮಗಳ ಶ್ರೀ ನಂದಿಬಂಡಿ ಬಸವೇಶ್ವರ ದೇವಸ್ಥಾನ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.