ಪಟ್ಟಣದ ನಿವೃತ್ತ ಹೈಕೋರ್ಟ್ ಮುಖ್ಯ ನ್ಯಾಯಾಧೀಶರು, ಚಿತ್ರದುರ್ಗ ಮಾಜಿ ಸಂಸದರು ಎನ್.ವೈ.ಹನುಮಂತಪ್ಪನವರ 86ನೇ ಹುಟ್ಟು ಹಬ್ಬದ ಪ್ರಯುಕ್ತ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬೇಟಿ ನೀಡಿ ಬಡ ರೋಗಿಗಳಿಗೆ ಹಾಲು, ಬ್ರೆಡ್ ವಿತರಣೆ ಮಾಡಿದರು ಮತ್ತು ಅವರ ಆರೋಗ್ಯವನ್ನು ವಿಚಾರಿಸಿದರು. ಬುಡಕಟ್ಟು ಸಮಾಜದಲ್ಲಿ ಜನಿಸಿ ಆಂಧ್ರ, ಒಡಿಸ್ಸಾ, ಕರ್ನಾಟಕ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸದರು. ನಿವೃತ್ತ ಆದ ನಂತರ ಕಾಂಗ್ರೆಸ್ ತಕ್ಷಣವೇ ಅವರನ್ನು ಗುರುತಿಸಿ ಚಿತ್ರದುರ್ಗ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ನಂತರ ಭರ್ಜರಿ ಮತಗಳಿಂದ ಜಯಶೀಲರಾದರು. ಚಿತ್ರದುರ್ಗ ಜಿಲ್ಲೆ ಕುದಾಪುರ ಗ್ರಾಮದ ಪ್ರಮುಖ ರಸ್ತೆಯಲ್ಲಿ ಬಾಬಾ ಆಟೋಮಿಕ್ ರಿಸರ್ಜ್ ಸೆಂಟರ್, ಭಾರತೀಯ ವಿಜ್ಞಾನ ಸಂಸ್ಥೆ, ಡಿ.ಆರ್.ಡಿ.ಓ ಸ್ಥಾಪಿಸಿದರು. ಎನ್.ವೈ.ಹನುಮಂತಪ್ಪ ರವರು ಸರಳ ಸಜ್ಜನಿಕೆ ವ್ಯಕ್ತಿ ಆಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಉಪಸ್ಥಿತರಾದ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಮುದಿಯಪ್ಪ, ಬೋರನಾಯಕ, ಜಿ.ತಿಪ್ಪೇಸ್ವಾಮಿ, ಬಸಪ್ಪನಾಯಕ, ಪ.ಪಂ.ಸದಸ್ಯ ಅಬಕಾರಿ ತಿಪ್ಪೇಸ್ವಾಮಿ, ಕೆ.ಪಿ.ತಿಪ್ಪೇಸ್ವಾಮಿ, ಮಾಜಿ ಗ್ರಾ.ಪಂ ಅಧ್ಯಕ್ಷ ಬಂಡೆ ಕಪಿಲೆ ಓಬಣ್ಣ, ಆಶೋಕ, ಕುದಾಪುರ ಪ್ರಕಾಶ್, ಮಲ್ಲೂರಹಳ್ಳಿ ಮಾಜಿ ಗ್ರಾ.ಪಂ ಉಪಾಧ್ಯಕ್ಷ ಕಾಟಯ್ಯ, ಮಾಜಿ ಗ್ರಾ.ಪಂ ಅಧ್ಯಕ್ಷ ಕಾಟಂಲಿAಗಯ್ಯ, ಓಬಳೇಶ್, ದೇವರಹಳ್ಳಿ ಮಾಜಿ ಗ್ರಾ.ಪಂ ಅಧ್ಯಕ್ಷರು ಹಾಲಿ ಸದಸ್ಯ ಕಾಟಯ್ಯ, ಚನ್ನಗಾನಹಳ್ಳಿ ರುದ್ರಮುನಿ, ಮಾಜಿ ಗ್ರಾ.ಪಂ ಅಧ್ಯಕ್ಷ ಚನ್ನಬಸಯ್ಯನಹಟ್ಟಿ ತಿಪ್ಪೇಸ್ವಾಮಿ, ಬೋರಯ್ಯ, ಕಾಮರಾಜ್, ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಇದ್ದರು.