ಬಳ್ಳಾರಿ ನಗರದ 23ನೇ ವಾರ್ಡಿನ ಮಹಾನಂದಿಕೊಟ್ಟಂ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಅಂದಾಜು 1.32 ಕೋಟಿ ರೂ.ಗಳ ವೆಚ್ಚದಲ್ಲಿ ಮರು ನಿರ್ಮಾಣ ಮಾಡಲಾಗಿದ್ದು, 5 ನೂತನ ಕೊಠಡಿಗಳನ್ನು ಉದ್ಘಾಟಿಸಿದರು. 5 ಕೊಠಡಿಗಳು, ಒಂದು ಅಡುಗೆ ಕೋಣೆ, ಶೌಚಾಲಯ ಹಾಗೂ ಕಾಂಪೌಂಡ್, ಪೇವರ್ಸ್ ಅಳವಡಿಕೆ ಕಾಮಗಾರಿಗಳನ್ನು ಪೂರ್ಣಗೊಳಿಸಿ ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ಉದ್ಘಾಟನಾ ಸಮಾರಂಭದಲ್ಲಿ ಮೇಯರ್ ಗಾದೆಪ್ಪ, ಆಯುಕ್ತರಾದ ಮಂಜುನಾಥ್, ವಾರ್ಡ್ ಪ್ರಮುಖರಾದ ಸೋಮಶೇಖರ್, ಗೌತಮ್, ಬ್ರಹ್ಮಯ್ಯ, ಹುಲಿಗೆಪ್ಪ, ಕೆಂಚಪ್ಪ, ಮಾಜಿ ಮೇಯರ್ ಎಂ.ರಾಜೇಶ್ವರಿ, ಕಾಂಗ್ರೆಸ್ ಮುಖಂಡರಾದ ಸುಬ್ಬರಾಯುಡು, ಪರಶುರಾಮುಡು, ಥಿಯೇಟರ್ ಶಿವು ಮತ್ತಿತರರು ಹಾಜರಿದ್ದರು.
ನಗರದ 35ನೇ ವಾರ್ಡ್ ವ್ಯಾಪ್ತಿಯ ರಾಜೇಶ್ವರಿ ನಗರದಲ್ಲಿ ಅಂದಾಜು ವೆಚ್ಚ 20 ಲಕ್ಷ ರೂ.ಗಳಲ್ಲಿ ಮೇದಾರ ಸಮದಾಯ ಭವನದ ನಿರ್ಮಾಣ ಕಾಮಗಾರಿ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭ ವಾರ್ಡಿನ ಸದಸ್ಯ ಮಿಂಚು ಶ್ರೀನಿವಾಸ, ಪಾಲಿಕೆಯ ಸದಸ್ಯರಾದ ಕುಬೇರಾ, ಮಾಜಿ ಮೇಯರ್ ರಾಜೇಶ್ವರಿ, ಕಾಂಗ್ರೆಸ್ ಮುಖಂಡರಾದ ಎಲ್.ಮಾರೆಣ್ಣ, ಶೇಖಣ್ಣ, ರಾಮಾಂಜನೇಯ, ದಾನಪ್ಪ, ಬಾನಕ್ಕ, ಪ್ರಸಾದ್, ಮಂಜು, ಶ್ಯಾಮ್, ದೇಗಲಪಾಡು ನಾರಾಯಣ ಸೇರಿದಂತೆ ಹಲವರು ಹಾಜರಿದ್ದರು.

ವಾರ್ಡ್ ಸಂಖ್ಯೆ 3ರ ಭತ್ರಿ ಪ್ರದೇಶದಲ್ಲಿ 20 ಲಕ್ಷ ರೂ.ಗಳ ವೆಚ್ಚದಲ್ಲಿ ಅಂಗನವಾಡಿ ಕೇಂದ್ರ ನಂ.01ರ ನಿರ್ಮಾಣ ಕಾಮಗಾರಿಗೆ ಶಾಸಕ ನಾರಾ ಭರತ್ ರೆಡ್ಡಿಯವರು ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭ ವಾರ್ಡಿನ ಸದಸ್ಯರೂ ಮಾಜಿ ಮೇಯರ್ ಎಂ.ರಾಜೇಶ್ವರಿ, ಕಾಂಗ್ರೆಸ್ ಮುಖಂಡರಾದ ವಿಷ್ಣು ಬೋಯಪಾಟಿ, ಪರಶುರಾಮುಡು, ಸುಬ್ಬರಾಯುಡು, ಭತ್ರಿ ಮಂಜು, ಸೋಮಪ್ಪ ಮತ್ತಿತರರು ಹಾಜರಿದ್ದರು.