ಶನಿವಾರ ಬಳ್ಳಾರಿಯ 1ನೇ ವಾರ್ಡ್ ವ್ಯಾಪ್ತಿಯ ಪಾರ್ವತಿ ನಗರದ (ಕೇಂದ್ರ ಕಾರಾಗೃಹದ ಬಳಿ) ಶಾಸಕರ ಅನುದಾನದಲ್ಲಿ ಅಂದಾಜು 29.33 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಾಣ ಆಗಿರುವ ನೂತನ ಮಾರುಕಟ್ಟೆ ಪ್ರಾಂಗಣವನ್ನು ಉದ್ಘಾಟಿಸಿದರು.
ಬೀದಿ ಬದಿ ಇದ್ದ ವ್ಯಾಪಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಆಗುತ್ತಿದ್ದ ತೊಂದರೆ ಗಮನಿಸಿ, ವ್ಯಾಪಾರಿಗಳಿಗೆ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಮಾರುಕಟ್ಟೆಯ ನಿರ್ಮಾಣ ಮಾಡಲಾಗಿದೆ, ಇದರ ಸದ್ಬಳಕೆ ಆಗಬೇಕು, ಈ ಮೊದಲು ಇಲ್ಲಿದ್ದ ವ್ಯಾಪಾರಿಗಳೇ ಮಳಿಗೆಗಳನ್ನು ಪಡೆದು ವ್ಯಾಪಾರ ಮಾಡಬೇಕು ಎಂದರು.

ಈ ಸಂದರ್ಭ ಮೇಯರ್ ಪಿ.ಗಾದೆಪ್ಪ, ವಾರ್ಡಿನ ಪಾಲಿಕೆಯ ಸದಸ್ಯ ಗುಡಿಗಂಟಿ ಹನಮಂತು, ಮಾಜಿ ಮೇಯರ್ ಎಂ.ರಾಜೇಶ್ವರಿ, ಸದಸ್ಯ ಪೇರಂ ವಿವೇಕ್, ಪಾಲಿಕೆಯ ಆಯುಕ್ತ ಮಂಜುನಾಥ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ಕಾಂಗ್ರೆಸ್ ಮುಖಂಡರಾದ ಸುಬ್ಬರಾಯುಡು, ಮಹಮ್ಮದ್ ಭಾಯ್, ಪರಶುರಾಮುಡು, ಹಗರಿ ಗೋವಿಂದ, ಪದ್ಮಾ, ಥಿಯೇಟರ್ ಶಿವು ಮತ್ತಿತರರು ಹಾಜರಿದ್ದರು.