LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕ್ರಿಕೆಟ್ ವಿಜೇತರಿಗೆ ಧ್ರುವ ಕಪ್ ವಿತರಿಸಿದ ಎಂ.ಜಿ ಕನಕ

ಬಳ್ಳಾರಿ: ತಾಲೂಕಿನ ಕಕ್ಕಬೇವಿನಹಳ್ಳಿ ಗ್ರಾಮದಲ್ಲಿ "ಧ್ರುವ ಕಪ್ ಕೆ.ಪಿ.ಎಲ್ ಸೀಸನ್ - 5" ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.

 

ಧ್ರುವ ಆಸರೆ ಫೌಂಡೇಶನ್ ಸಂಸ್ಥಾಪಕ, ಅಧ್ಯಕ್ಷರು ಹಾಗೂ ಅಹಿಂದ ಬಳ್ಳಾರಿ ಜಿಲ್ಲಾಧ್ಯಕ್ಷರಾದ ಎಂ.ಜಿ ಕನಕ ಅವರು ಬ್ಯಾಟಿಂಗ್ ಮಾಡುವ ಮೂಲಕ ಫೈನಲ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿದರು. ಫೈನಲ್ ಕ್ರಿಕೆಟ್ ಮ್ಯಾಚ್ ವಿನ್ನರ್ DYNAMIC DYNAMOS ತಂಡಕ್ಕೂ ಹಾಗೂ ರನ್ನರ್ BLAZING BLASTERS ತಂಡಕ್ಕೂ ಕಪ್ ವಿತರಣೆ ಮಾಡಿದರು.

 

ನಂತರ ಮಾತನಾಡಿದ ಎಂ.ಜಿ ಕನಕ ಅವರು ಫೈನಲ್ ಕ್ರಿಕೆಟ್ ಪಂದ್ಯಾವಳಿ ಅತ್ಯಂತ ಯಶಸ್ವಿಯಾಗಿ ನಡೆಯಿತು ಹಾಗೂ ಇತ್ತೀಚಿನ ದಿನಗಳಲ್ಲಿ ದುಶ್ಚಟಗಳಿಗೆ ಯುವಕರು ಒಳಗಾಗುತ್ತಿದ್ದು, ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದರಿಂದ ಆರೋಗ್ಯ ವೃದ್ಧಿಯಾಗಲಿದೆ. ಇಂತಹ ಕ್ರೀಡಾಕೂಟ ಹಮ್ಮಿಕೊಳ್ಳುವುದು ಒಳ್ಳೆಯ ಬೆಳವಣಿಗೆ, ಕ್ರಿಕೆಟ್ ಪಂದ್ಯಾವಳಿಯಲ್ಲಿ ಸೋಲು ಗೆಲುವು ಎನ್ನದೇ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಯುವಕರು ಕ್ರಿಕೆಟ್ ಪಂದ್ಯಾವಳಿಯನ್ನು ರೂಪಿಸಿ ಕ್ರೀಡಾಸ್ಫೂರ್ತಿ ಮೆರೆಯುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಚೇಳ್ಳಗುರ್ಕಿ ನಾಗರಾಜ್, ಡೊಣೆಕಲ್ ರಾಜಶೇಖರ್, ಹರಗಿನಡೋಣಿ ಗಾದಿಲಿಂಗ, ಮಾಸೂಮ್, ಸಿ.ಗಂಗಾಧರ್, ಯಾಳ್ಪಿ ಹೇಮರಾಜ್, ನಾಗರಾಜ್ (ಬೈರೆಡ್ಡಿ), ವೈಫೈ ಶಿವು, ಭೀಮೇಶ್ ಆರಿಫ್, ಕಕ್ಕಬೇವಿನಹಳ್ಳಿ ಗ್ರಾಮದ ಕ್ರೀಡಾಪಟುಗಳಾದ ಎ.ಲಕ್ಷ್ಮಣ, ಕೆ.ಆನಂದ, ಎಂ.ಸುರೇಶ್, ಎ.ಲಿಂಗಮೂರ್ತಿ, ಎಚ್.ಅಶೋಕ್ ಸೇರಿದಂತೆ ಇನ್ನೂ ಅನೇಕ ಕ್ರೀಡಾಪಟುಗಳು ಉಪಸ್ಥಿತರಿದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST