ನಾಯಕನಹಟ್ಟಿ : ಹಾಯ್ಕಲ್ ಗ್ರಾಮದಲ್ಲಿ ಆರಾಧ್ಯ ದೈವ ರಾಮಲಿಂಗೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಹಬ್ಬವನ್ನು ಭಕ್ತರು ಸಡಗರ ಸಂಭ್ರಮದಿಂದ ಆಚರಿಸಿದರು. ದೇವಾಲಯದಲ್ಲಿ ವಿಶೇಷ ಪೂಜೆ ಕಾರ್ಯಗಳು ನಡೆಯಿತು. ಬೆಳಿಗ್ಗೆ ಮತ್ತು ರಾತ್ರಿಯ ವೇಳೆಯಿಂದ ಮಹಿಳೆಯರು ಕುಟುಂಬದೊಂದಿಗೆ ತೆರಳಿ ದೇವರ ದರ್ಶನ ಪಡೆದರು.
ಭಕ್ತರು ಭಕ್ತಿ ಸಾಗರವೇ ಹರಿದು ಬಂದಿತ್ತು. ದೇವಾಲಯದಲ್ಲಿ ಮಕ್ಕಳಿಗೆ ಬೆಲ್ಲದ ತೂಕ ನೇರವೇರಿಸಿದರು. ಶಿವರಾತ್ರಿ ದಿನದ ಅಂಗವಾಗಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಜೊತೆಗೆ ಅನೇಕರು ಬೆಳಿಗ್ಗೆಯಿಂದಲೇ ಉಪವಾಸವಿರುತ್ತಾರೆ. ಮನೆಗಳಲ್ಲಿ ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿತ್ತು. ಭಕ್ತರು ಅತ್ಯಂತ ಸಡಗರದಿಂದ ಮತ್ತು ಶ್ರದ್ಧ ಭಕ್ತಿಯಿಂದ ದೇವರನ್ನು ಆರಾಧಿಸುತ್ತಾರೆ ದೃಶ್ಯ ಸಾಮಾನ್ಯವಾಗಿತ್ತು. ಅನೇಕ ಮಕ್ಕಳು ವೇಷಭೂಷಣವನ್ನು ತೊಡಗಿಕೊಂಡಿದ್ದರು. ರಾಮಲಿಂಗೇಶ್ವರ ವಿಗ್ರಹವನ್ನು ಪಲ್ಲಕ್ಕಿಯಲ್ಲಿ ಕುರಿಸುವುದರ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಮುತೈದೆಯರು ಕುಂಭಮೇಳ, ದೀಪೋತ್ಸವ ಮೆರವಣಿಗೆಯಲ್ಲಿ ಸಾಗಿದರು.
ಹಾಯ್ಕಲ್ ಗ್ರಾಮದ ಎನ್.ನಾಗರಾಜರೆಡ್ಡಿ ಮಾತನಾಡಿ ಶಿವರಾತ್ರಿ ಹಬ್ಬದ ಪ್ರಯುಕ್ತ 52ವರ್ಷಗಳಿಂದಲೂ ಹಬ್ಬಗಳನ್ನು ಆಚರಿಸುತ್ತ ಬಂದಿದ್ದೇವೆ. ಕುಂಭಮೇಳದಲ್ಲಿ ಇದ್ದಂತ ನೀರನ್ನು ರಾಮಲಿಂಗೇಶ್ವರ ಸ್ವಾಮಿಯ ಅಭಿಷೇಕ ಮಾಡಿ ಬಹಳ ಆದ್ಧೂರಿಯಾಗಿ ಆಚರಿಸುತ್ತೇವೆ. ಸುಮಾರು 2 ಸಾವಿರದಿಂದ 3 ಸಾವಿರದವರೆಗೆ ಬರುವಂತ ಭಕ್ತಧಿಗಳಿಗೆ ಅನ್ನದಾಸೋಹ ಇರುತ್ತದೆ ಎಂದು ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಾದ ಎನ್.ನಾಗರಾಜರೆಡ್ಡಿ, ಕೆ.ಜಿ.ಲೋಕೇಶ್ರೆಡ್ಡಿ, ಪಿ.ಚಿದಾನಂದ, ರವಿಶಂಕರ್ರೆಡ್ಡಿ, ಎಲ್.ವೆಂಕಟೇಶ್ರೆಡ್ಡಿ, ನಾಗರಾಜ್ರೆಡ್ಡಿ, ಕ್ಯಾಸಕಿಪಾಪಯ್ಯ, ಡಬ್ಬರಾಜಪ್ಪ, ಹಾಗೂ ಭಕ್ತಾಧಿಗಳು ಮುಖಂಡರುಗಳು ಇದ್ದರು.