LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕಾನಿಪ ಜಿಲ್ಲಾ ಕಾರ್ಯದರ್ಶಿಯಾಗಿ ಎಂ.ಇ.ಜೋಷಿ ಅವಿರೋಧ ಆಯ್ಕೆ

ಬಳ್ಳಾರಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿಯಾಗಿ ಕೋಲಾರವಾಣಿ ಪತ್ರಿಕೆಯ ಹಿರಿಯ ಜಿಲ್ಲಾ ವರದಿಗಾರ ಎಂ.ಇ.ಜೋಷಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇವರೊಂದಿಗೆ ದ್ಯಾವನಗೌಡ ಪಾಟೀಲ್ ಮತ್ತು ಹಿರಿಯ ಪತ್ರಕರ್ತ ಪೆಂಡಕೂರು ರಘುರಾಮ್ ಕೂಡ ಅವಿರೋಧವಾಗಿ ಆಯ್ಕೆಯಾದರು.

ತಮ್ಮನ್ನು ಅವಿರೋಧವಾಗಿ ಆಯ್ಕೆ ಮಾಡಿದ ಬಳ್ಳಾರಿ ಜಿಲ್ಲೆಯ ಎಲ್ಲ ಹಿರಿ-ಕಿರಿಯ ಪತ್ರಕರ್ತರಿಗೆ ಜೋಷಿ, ಪಾಟೀಲ್ ಮತ್ತು ರಘುರಾಮ್ ಅವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಸಂಘದ ನೂತನ ಅಧ್ಯಕ್ಷರಾದ ಎನ್.ವೀರಭದ್ರಗೌಡ ಅವರ ನೇತೃತ್ವದಲ್ಲಿ ಸಂಘವನ್ನು ಬಲಪಡಿಸುವ ಆಶಯವನ್ನು ವ್ಯಕ್ತಪಡಿಸಿರುವ ಅವರು, ಸಂಘಟನೆಯಿಂದ ದೂರ ಉಳಿದ ಕ್ರಿಯಾಶೀಲ ಪತ್ರಕರ್ತರನ್ನು ಸಂಘದ ತೆಕ್ಕೆಗೆ ತರುವ ಮತ್ತು ಸಂಘಕ್ಕೆ ಹೊಸತನದ ತಾನನ ಮೂಡಿಸುವಲ್ಲಿ ಎಲ್ಲ ರೀತಿಯ ಸಹಕಾರಗಳನ್ನು ನೀಡುವುದಾಗಿ ಹೇಳಿಕೊಂಡಿದ್ದಾರೆ.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST