LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪಿಂಚಣಿ ಅದಾಲತ್ ಸದುಪಯೋಗವಾಗಲಿ : ಮಂಜುನಾಥ್

ಕವಿತಾಳ: ಅರ್ಹ ಫಲಾನುಭವಿಗಳು ಸರ್ಕಾರದ ಪಿಂಚಣಿಯಿಂದ ವಂಚಿತರಾಗಬಾರದೆಂದು ಸರ್ಕಾರ ಪಿಂಚಿಣಿ ಅದಾಲತ್ ಗಳನ್ನು ಆಯೋಜಿಸುತ್ತಿದ್ದು, ಅರ್ಹರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಉಪ ತಹಸೀಲ್ದಾರ್ ಮಂಜುನಾಥ್ ಹೇಳಿದರು.

ಕವಿತಾಳ ಹೋಬಳಿಯ ಹೀರಾ ಗ್ರಾಮದಲ್ಲಿ ಸರ್ಕಾರದ ಆದೇಶದಂತೆ ಪ್ರತಿ ತಿಂಗಳ ತಾಲೂಕು ಆಡಳಿತ ವತಿಯಿಂದ ಆಯೋಜಿಸಿದ್ದ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸರ್ಕಾರದ ವತಿಯಿಂದ ಸಂಧ್ಯಾ ಕಾಲದಲ್ಲಿ ಹಿರಿಯ ನಾಗರಿಕರು, ಅಂಗವಿಕಲರು ವಿಧವಾ ಮಹಿಳೆಯರು, ವಯೋ ವೃದ್ಧರು ಸಮಾಜದಲ್ಲಿ ಗೌರವಯುತ ವಾಗಿ ಬದುಕಲು ಸರ್ಕಾರದ ವತಿಯಿಂದ ವಿವಿಧ ಮಾಶಾಸನ ಗಳ ಸೌಲಭ್ಯ ವನ್ನು ಒದಗಿಸಿದೆ. ಅರ್ಹ ಫಲನುಭವಿಗಳು ಸೂಕ್ತ ದಾಖಲಾತಿ ಸಲ್ಲಿಸಿ ಯೋಜನೆಗಳ ಸದುಪಯೋಗ ಪಡೆಯಲು ಕೋರಿದರು. ಮತ್ತು ಈಗಾಗಲೇ ಮಾಶಾಸನ ಆದೇಶ ಹೊಂದಿದವರು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡಿಕೊಂಡು ಮರುಚಲನೆ ಮಾಡಿಕೊಳ್ಳಲು ಸೂಚಿಸಿದರು.

ಈ ಕಾರ್ಯಕ್ರಮದಲ್ಲಿ ಐದು ಜನ ಫಲನುಭವಿಗಳಿಗೆ ಸ್ಥಳದಲ್ಲಿಯೇ ಆದೇಶ ಪ್ರತಿಗಳನ್ನು ವಿತರಿಸಲಾಯಿತು

ಈ ಸಂಧರ್ಭದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳಾದ ಸದಾಕಲಿ, ಸಿಬ್ಬಂದಿಗಳಾದ ವಿಜಯಲಕ್ಷ್ಮಿ, ಹೀರಾ ಗ್ರಾಮದ ಹಂಪಯ್ಯ ಮೇಟಿ, ಅಮರೇಶ್, ಬಸವರಾಜ ದೊಡ್ಡಮನಿ, ಅದಪ್ಪ, ಗವಿಯಪ್ಪ, ಅಶೋಕ್ ನಾಯಕ ಇದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST