ಕವಿತಾಳ ಹೋಬಳಿಯ ಹೀರಾ ಗ್ರಾಮದಲ್ಲಿ ಸರ್ಕಾರದ ಆದೇಶದಂತೆ ಪ್ರತಿ ತಿಂಗಳ ತಾಲೂಕು ಆಡಳಿತ ವತಿಯಿಂದ ಆಯೋಜಿಸಿದ್ದ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸರ್ಕಾರದ ವತಿಯಿಂದ ಸಂಧ್ಯಾ ಕಾಲದಲ್ಲಿ ಹಿರಿಯ ನಾಗರಿಕರು, ಅಂಗವಿಕಲರು ವಿಧವಾ ಮಹಿಳೆಯರು, ವಯೋ ವೃದ್ಧರು ಸಮಾಜದಲ್ಲಿ ಗೌರವಯುತ ವಾಗಿ ಬದುಕಲು ಸರ್ಕಾರದ ವತಿಯಿಂದ ವಿವಿಧ ಮಾಶಾಸನ ಗಳ ಸೌಲಭ್ಯ ವನ್ನು ಒದಗಿಸಿದೆ. ಅರ್ಹ ಫಲನುಭವಿಗಳು ಸೂಕ್ತ ದಾಖಲಾತಿ ಸಲ್ಲಿಸಿ ಯೋಜನೆಗಳ ಸದುಪಯೋಗ ಪಡೆಯಲು ಕೋರಿದರು. ಮತ್ತು ಈಗಾಗಲೇ ಮಾಶಾಸನ ಆದೇಶ ಹೊಂದಿದವರು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡಿಕೊಂಡು ಮರುಚಲನೆ ಮಾಡಿಕೊಳ್ಳಲು ಸೂಚಿಸಿದರು.
ಈ ಕಾರ್ಯಕ್ರಮದಲ್ಲಿ ಐದು ಜನ ಫಲನುಭವಿಗಳಿಗೆ ಸ್ಥಳದಲ್ಲಿಯೇ ಆದೇಶ ಪ್ರತಿಗಳನ್ನು ವಿತರಿಸಲಾಯಿತುಈ ಸಂಧರ್ಭದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳಾದ ಸದಾಕಲಿ, ಸಿಬ್ಬಂದಿಗಳಾದ ವಿಜಯಲಕ್ಷ್ಮಿ, ಹೀರಾ ಗ್ರಾಮದ ಹಂಪಯ್ಯ ಮೇಟಿ, ಅಮರೇಶ್, ಬಸವರಾಜ ದೊಡ್ಡಮನಿ, ಅದಪ್ಪ, ಗವಿಯಪ್ಪ, ಅಶೋಕ್ ನಾಯಕ ಇದ್ದರು.