LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಭಾವೖಕ್ಯತೆಯ ಕೊಪ್ಪಳದ ಮಹಾಪರಿಷೆ.

ಕಲ್ಯಾಣದ ಉತ್ತರ ಕರ್ನಾಟಕದಲಿ

ಕೊಪ್ಪಳ ಆರಾಧ್ಯದೇವರ ಸಾಮರಸ್ಯತೆಯ

ಮಹಿಮೆಯನು ಸಾರುತಲಿಹುದು

ಸಾಗರದೋಪಾದಿಯ ಮಹಾಪರಿಷೆಯು./1/

 

ಶ್ರೀ ಅಭಿನವ ಗವಿಸಿದ್ದೇಶ್ವರರ ಜಾತ್ರೆಯು

ಸರಳತೆ ಸಾತ್ವಿಕತೆಯ ಪ್ರತಿರೂಪವು

ದಕ್ಷಿಣ ಭಾರತದ ಮಹಾಕುಂಭಮೇಳವು

ಶ್ರೀಮಠದ ಸಾಂಸ್ಕ್ರತಿಕ ಭವ್ಯಪರಂಪರೆಯು./2/

 

ಅರಿವಿನ ತ್ರಿವಿಧ ಮಹಾದಾಸೋಹವು

ಸರ್ವರ ಜಾಗ್ರೃತಿ-ಚಿಚ್ಛಕ್ತಿಯ ಪ್ರೇರಕವು

ಗ್ರಾಮೀಣ ಸೊಗಡಿನಆಟೋಟವು ಶುಚಿ-ರುಚಿ ಸಾತ್ವಿಕ ಆಹಾರವು./3/

 

ಕಣ್ಮನ ಸೆಳೆಯುವ ಚಿತ್ತಚಿತ್ತಾರದ

ಬೆಳಕಿನ ದೀಪಗಳ ರಂಗೋಲಿಯು.

ಆಯಸ್ಕಾಂತದಂತಹ ಕಲಾಸಾಗರೋತ್ಸವವು

ವಿಶೇಷಚೇತನರ ಕಲ್ಯಾಣ ಮಹೋತ್ಸವವು/4/.

 

ಪ್ರವಚನ ಚಿಂತನ ಸಂಗೀತ-ಸಾಹಿತ್ಯಮೇಳವು

ಮನಾಕರ್ಷಕ ಮನರಂಜನೆಯು.

ದೇಶಿ ಶೖಲಿಯ ವೇಷಭೂಷಣಗಳು

ಜಾನಪದರ ವಿಧವಿಧ ಕ್ರೀಡೆಗಳು./5/

 

ದೇಶಿ ಸಂಸ್ಕ್ರೃತಿಯ ಹಿರಿಮೆ-ಗರಿಮೆಯನು

ವಿಶ್ವಕೆ ಸಾರಿಸಾರಿ ಅರುಹುತಲಿಹವು.

'ಮನುಕುಲಂ ತಾನೊಂದೇ ವಲಂ'

ಭಾವೖಕೖತೆ ಪ್ರತಿಬಿಂಬಿಸುವಂತಿಹವು./6/

 

ಸರ್ವರಿಗೆ ಸ್ಪೂರ್ತಿಯ ಸೆಲೆಯು

ಉತ್ಸಾಹ-ಪ್ರೋತ್ಸಾಹದ ಕಾರಂಜಿಯು

ಹ್ರೃದಯಾನಂದ ಕಣ್ಮನಕೋರೖಸುವ ಚೖತನ್ಯದಚಿಲುಮೆಯಂತಿಹುದು./7/

 

ಸಪ್ತಸಾಗರದೋಪಾದಿಯಲಿಹುದು

ಸದ್ಭಕ್ತರ ಆರೋಗ್ಯ ಮಹಾಮೇಳವು

ಕೊಪ್ಪಳದ ಗವಿಸಿದ್ದೇಶ್ವರರ ಮಹಾಪರಿಷೆಯ

ವೖಭವವನು ಬಣ್ಣಿಸಲು ಪದಗಳೇ ಸಾಲವು./8/



ಪ್ರೊ.ಶಕುಂತಲಾ.ಚನ್ನಪ್ಪ.ಸಿಂಧೂರ.

ಕವಯಿತ್ರಿ,ಸಾಹಿತ್ಯಚಿಂತಕರು.

ಗದಗ.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST