ಕೊಪ್ಪಳ ಆರಾಧ್ಯದೇವರ ಸಾಮರಸ್ಯತೆಯ
ಮಹಿಮೆಯನು ಸಾರುತಲಿಹುದು
ಸಾಗರದೋಪಾದಿಯ ಮಹಾಪರಿಷೆಯು./1/
ಶ್ರೀ ಅಭಿನವ ಗವಿಸಿದ್ದೇಶ್ವರರ ಜಾತ್ರೆಯು
ಸರಳತೆ ಸಾತ್ವಿಕತೆಯ ಪ್ರತಿರೂಪವು
ದಕ್ಷಿಣ ಭಾರತದ ಮಹಾಕುಂಭಮೇಳವು
ಶ್ರೀಮಠದ ಸಾಂಸ್ಕ್ರತಿಕ ಭವ್ಯಪರಂಪರೆಯು./2/
ಅರಿವಿನ ತ್ರಿವಿಧ ಮಹಾದಾಸೋಹವು
ಸರ್ವರ ಜಾಗ್ರೃತಿ-ಚಿಚ್ಛಕ್ತಿಯ ಪ್ರೇರಕವು
ಗ್ರಾಮೀಣ ಸೊಗಡಿನಆಟೋಟವು ಶುಚಿ-ರುಚಿ ಸಾತ್ವಿಕ ಆಹಾರವು./3/
ಕಣ್ಮನ ಸೆಳೆಯುವ ಚಿತ್ತಚಿತ್ತಾರದ
ಬೆಳಕಿನ ದೀಪಗಳ ರಂಗೋಲಿಯು.
ಆಯಸ್ಕಾಂತದಂತಹ ಕಲಾಸಾಗರೋತ್ಸವವು
ವಿಶೇಷಚೇತನರ ಕಲ್ಯಾಣ ಮಹೋತ್ಸವವು/4/.
ಪ್ರವಚನ ಚಿಂತನ ಸಂಗೀತ-ಸಾಹಿತ್ಯಮೇಳವು
ಮನಾಕರ್ಷಕ ಮನರಂಜನೆಯು.
ದೇಶಿ ಶೖಲಿಯ ವೇಷಭೂಷಣಗಳು
ಜಾನಪದರ ವಿಧವಿಧ ಕ್ರೀಡೆಗಳು./5/
ದೇಶಿ ಸಂಸ್ಕ್ರೃತಿಯ ಹಿರಿಮೆ-ಗರಿಮೆಯನು
ವಿಶ್ವಕೆ ಸಾರಿಸಾರಿ ಅರುಹುತಲಿಹವು.
'ಮನುಕುಲಂ ತಾನೊಂದೇ ವಲಂ'
ಭಾವೖಕೖತೆ ಪ್ರತಿಬಿಂಬಿಸುವಂತಿಹವು./6/
ಸರ್ವರಿಗೆ ಸ್ಪೂರ್ತಿಯ ಸೆಲೆಯು
ಉತ್ಸಾಹ-ಪ್ರೋತ್ಸಾಹದ ಕಾರಂಜಿಯು
ಹ್ರೃದಯಾನಂದ ಕಣ್ಮನಕೋರೖಸುವ ಚೖತನ್ಯದಚಿಲುಮೆಯಂತಿಹುದು./7/
ಸಪ್ತಸಾಗರದೋಪಾದಿಯಲಿಹುದು
ಸದ್ಭಕ್ತರ ಆರೋಗ್ಯ ಮಹಾಮೇಳವು
ಕೊಪ್ಪಳದ ಗವಿಸಿದ್ದೇಶ್ವರರ ಮಹಾಪರಿಷೆಯ
ವೖಭವವನು ಬಣ್ಣಿಸಲು ಪದಗಳೇ ಸಾಲವು./8/

ಪ್ರೊ.ಶಕುಂತಲಾ.ಚನ್ನಪ್ಪ.ಸಿಂಧೂರ.
ಕವಯಿತ್ರಿ,ಸಾಹಿತ್ಯಚಿಂತಕರು.
ಗದಗ.