LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News Districts

ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ: ಶಾಸಕ ನಾರಾ ಭರತ್ ರೆಡ್ಡಿ

ಬಳ್ಳಾರಿ :  ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.

 

ನಗರದ ಖಾಸಗಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಕರ್ನಾಟಕ ಯುವ ಜಾಗೃತಿ ವೇದಿಕೆಯನ್ನು ಉದ್ಘಾಟಿಸಿ ಮಾತನಾಡಿದರು.

 

ಕನ್ನಡ ನೆಲದ ಉದ್ಯೋಗಗಳು ಕನ್ನಡಿಗರಿಗೆ ಸಿಗಬೇಕು, ಕನ್ನಡಿಗರಿಗೆ ಸಿಗಬೇಕಾದ ಅವಕಾಶಗಳು ಹಿಂದಿ ಮಾತಾಡುವವರ ಪಾಲಾಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.

 

ನಮ್ಮ ನೆಲ ನಮ್ಮ ಹಕ್ಕು - ನಮ್ಮ ಉದ್ಯೋಗ ನಮ್ಮ ಹಕ್ಕು ಎಂಬ ಘೋಷಣೆಯಡಿ ಹೋರಾಟ ಕಟ್ಟೋಣ ಎಂದು ಕರೆ ನೀಡಿದ ಅವರು ನಮ್ಮ ಯುವಕರಿಗೆ ಉದ್ಯೋಗ ದೊರಕಿಸುವುದಕ್ಕೆ ನಾನು ಬದ್ಧ ಎಂದರು.

 news_1779358558_8_651.webp

 

ನಗರದಲ್ಲಿ ಜನರು, ಅಕ್ಕ ತಂಗಿಯರು ನನ್ನನ್ನು ಭೇಟಿ ಮಾಡಿದಾಗ ಉದ್ಯೋಗ ಕೊಡಿಸುವಂತೆ ಕೇಳುತ್ತಾರೆ, ಆದರೆ ನಮ್ಮ ನೆಲದಲ್ಲಿ ಸಾವಿರಾರು ಕೋಟಿ ಸಂಪಾದಿಸುವ ಕಾರ್ಖಾನೆಯವರು ಹೊರ ರಾಜ್ಯದವರಿಗೆ ಉದ್ಯೋಗ ನೀಡುತ್ತಾರೆ ಎಂದರು.

 

ನಾವೆಲ್ಲ ಸೇರಿ ಹೋರಾಟ ಕಟ್ಟೋಣ, ನಾವೆಲ್ಲ ಸೇರಿ ನಮ್ಮ ಯುವಕರ ಬೇಡಿಕೆಗಳಿಗಾಗಿ ಹೋರಾಡೋಣ, ಯುವ ಶಕ್ತಿ ಮುಂದೆ ಯಾವ ಶಕ್ತಿಯೂ ಇಲ್ಲ ಎಂದು ಹೇಳಿದ ಶಾಸಕ ನಾರಾ ಭರತ್ ರೆಡ್ಡಿ ವ್ಯವಸ್ಥೆಯನ್ನು ಪ್ರಶ್ನಿಸುವ ಮನೋಭಾವ ರೂಢಿಸಿಕೊಳ್ಳೋಣ ಎಂದರು.

 

ನನಗೆ ಹಣ ಮಾಡುವ ಉದ್ಧೇಶ ಇಲ್ಲ, ನನ್ನ ತಂದೆ ಉದ್ಯಮಿ - ಶ್ರೀಮಂತ ವ್ಯಕ್ತಿ, ನಾನು ಕೂಡ ಆರ್ಥಿಕವಾಗಿ ಸ್ಥಿತಿವಂತ, ನನಗೆ ರಾಜಕೀಯದ ಮೂಲಕ ಹಣ ಸಂಪಾದಿಸಬೇಕಿಲ್ಲ, ನಿಮ್ಮ ಬೇಡಿಕೆಗಳಿಗಾಗಿ ನನ್ನ ಹೋರಾಟ ಪ್ರಾಮಾಣಿಕವಾಗಿರುತ್ತದೆ ಎಂದರು.

 

ನಮ್ಮ ನೆಲ ನಮ್ಮ ಜಲ ನಮ್ಮ ಹಕ್ಕು ಆಗಿದೆ, ಸ್ಥಳೀಯವಾಗಿ ಇರುವ ಉದ್ಯೋಗಗಳನ್ನು ಸ್ಥಳೀಯರಿಗೇ ನೀಡಬೇಕೆಂದು ಸಿಎಂ-ಡಿಸಿಎಂ ಅವರಿಗೆ ಮನವಿ ಮಾಡುವೆ ಎಂದ ಅವರು ಯುವಕರಿಗೆ ಉದ್ಯೋಗ ದೊರಕಿಸುವ ಸಂಬಂಧ ಸ್ಥಳೀಯವಾಗಿ ಬೃಹತ್ ಹೋರಾಟ ಆಯೋಜಿಸಲಿದ್ದೇವೆ, ನೀವೆಲ್ಲ ದೊಡ್ಡ ಸಂಖ್ಯೆಯಲ್ಲಿ ಭಾಗಿಯಾಗಬೇಕು ಎಂದರು.

 

ನಮ್ಮ ಭಾಗದ ಯುವಕರು ಸಣ್ಣ ಪುಟ್ಟ ಉದ್ಯೋಗ ಮಾಡುವುದನ್ನು ಕಂಡಾಗ ನನಗೆ ನೋವಾಗುತ್ತದೆ, ನಮ್ಮ ನೆಲದಲ್ಲಿ ಎಲ್ಲ ಸವಲತ್ತು ಪಡೆದು ಕಾರ್ಖಾನೆ ಸ್ಥಾಪಿಸಿದವರು ನಮಗೆ ಉದ್ಯೋಗ ಕೊಡುವವರೆಗೆ ಬಿಡುವುದಿಲ್ಲ ಎಂದರು.

 news_1779358559_9_586.webp

 

ನಾವು ಯುವಕರು ಪ್ರಶ್ನೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು, ಗುಮಾಸ್ತನಿಂದ ಪ್ರಧಾನಿಯವರಿಗೆ ಎಲ್ಲರನ್ನೂ ಪ್ರಶ್ನೆ ಮಾಡಬೇಕು, ನಿಮಗೆ ಪ್ರಶ್ನಿಸುವ ಹಕ್ಕಿದೆ, ಮಾತಾಡಿ, ಬಾಬಾಸಾಹೇಬ ಅಂಬೇಡ್ಕರ್ ಅವರು ಕೊಟ್ಟ ಅಧಿಕಾರವನ್ನು ನಾವು ಬಳಸೋಣ, ಡಾ.ಅಂಬೇಡ್ಕರ್ ಅವರನ್ನು ಸ್ಮರಿಸೋಣ, ಐತಿಹಾಸಿಕ ವ್ಯಕ್ತಿಗಳ ಬಗ್ಗೆ ತಿಳಿಯೋಣ ಎಂದರು.

 

ಇತ್ತೀಚೆಗೆ ಮಾದಕ ವಸ್ತುಗಳ ಬಳಕೆ ಯುವಕರಲ್ಲಿ ಹೆಚ್ಚಾಗಿದೆ, ಯುವಕರು ಇದರಿಂದ ದೂರ ಇರಬೇಕು, ಈ ನಿಟ್ಟಿನಲ್ಲಿ ಜಾಗೃತಿ ಮಾಡೋಣ ಎಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.

 

ಕಾಂಗ್ರೆಸ್ ಮುಖಂಡ ಸುಬ್ಬರಾಯುಡು, ಸಂಘಟನೆಯ ಸಂಸ್ಥಾಪಕ ಯಾಳ್ಪಿ ವಲಿ ಬಾಷ ಮತ್ತು ನಿಯೋಜಿತ ಪದಾಧಿಕಾರಿಗಳು ವೇದಿಕೆ ಮೇಲಿದ್ದರು.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ