ಹುಣಸಗಿ : ನಮ್ಮ ಕರ್ನಾಟಕ ಸೇನೆ ಹುಣಸಗಿ ತಾಲೂಕು ಅಧ್ಯಕ್ಷರಾದ ಭೀಮನಗೌಡ ಪೊಲೀಸ್ ಪಾಟೀಲ್ ಇವರ ಆದೇಶದ ಮೇರೆಗೆ ಹುಣಸಗಿ ನಗರ ಘಟಕದ ಉಪಾಧ್ಯಕ್ಷರನ್ನಾಗಿ ಆನಂದ. ಬಿ. ಹೊಸಗೌಡ್ರ ಇವರನ್ನು ನೇಮಕಗೊಳಿಸಿ ಆದೇಶ ಪತ್ರ ನೀಡಲಾಯಿತು.
ಈ ಸಂದರ್ಭದಲ್ಲಿ ರೈತ ಘಟಕದ ಅಧ್ಯಕ್ಷರಾದ ಸಂಗಮೇಶ ದೊರೆ, ತಾಲೂಕು ಉಪಾಧ್ಯಕ್ಷರಾದ ಭೀಮನಗೌಡ ಕಡದರಾಳ, ರೈತ ಘಟಕದ ಉಪಾಧ್ಯಕ್ಷರಾದ ಕರೆಪ್ಪ ದೊಡ್ಡಮನಿ, ಕೆಂಭಾವಿ ಹೋಬಳಿ ಘಟಕದ ಅಧ್ಯಕ್ಷರಾದ ಶರಣು ದೇವರಮನಿ, ಕಾರ್ಮಿಕ ಘಟಕದ ಅಧ್ಯಕ್ಷರಾದ ಗುರುರಾಜ ಅಂಗಡಿ , ಮಹ್ಮದ ರಫಿಕ್, ಮಲ್ಲು ದೊರೆ ಸೇರಿದಂತೆ ಇತರರು ಇದ್ದರು.