ಬಣ್ಣಗಳ ಸೊಗಸಾದ ವಸ್ತ್ರಸಂಹಿತೆಯನ್ನು ಅನುಸರಿಸಿ, ಕಾರ್ಯಕ್ರಮಕ್ಕೆ ವಿಶೇಷ ಸೊಬಗು, ಸಮರಸ್ಯ ಮತ್ತು ಬಣ್ಣರಂಜಿತ ವಾತಾವರಣವನ್ನು ತಂದರು. ಎಲ್ಲಾದರೂ ಇರು, ಎಂತಾದರೂ ಇರು – ಎಂದೆಂದಿಗೂ ನೀ ಕನ್ನಡವಾಗಿರು” ಎಂಬ ನಿಜವಾದ ಕನ್ನಡ ಸ್ಫೂರ್ತಿಯನ್ನು ಪ್ರತಿಬಿಂಬಿಸುವಂತಿತ್ತು. ಕರ್ನಾಟಕದ ಸಮೃದ್ಧ ಪರಂಪರೆ ಮತ್ತು ಸಂಸ್ಕೃತಿಯ ಬಗ್ಗೆ ಘನಗಂಭೀರ ಗರ್ವವನ್ನು ವ್ಯಕ್ತಪಡಿಸುವ ಹಬ್ಬದ ಸಂಭ್ರಮದಿಂದ ಕ್ಯಾಂಪಸ್ ತುಂಬಿತ್ತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕಲಾಶ್ರೀ ಡಾ. ಜಯಶ್ರೀ ಅರವಿಂದ್, ಶ್ರೀಸಂತವಾಣಿ ಸುಧಾಕರ್ ಹಾಗೂ ತಂಡ ಕನ್ನಡ ಗೀತೆಗಳನ್ನು ಹಾಡಿ ರಂಜಿಸಿದರು. ಕನ್ನಡ ರಾಜ್ಯೋತ್ಸವ ಗೀತಗಳನ್ನು ಹಾಡಿ, ಭಕ್ತಿ ಮತ್ತು ದೇಶಭಕ್ತಿಯ ಸ್ಫೂರ್ತಿಯನ್ನು ಹೆಚ್ಚಿಸಿದರು.
ಡಾ. ಜಯಶ್ರೀ ಅರವಿಂದ್ ಅವರು ಎಪಿಎಸ್ ಸಂಸ್ಥೆಗಳೊಂದಿಗೆ ತಮ್ಮ ಆರು ದಶಕಗಳ ದೀರ್ಘಕಾಲದ ನಂಟನ್ನು ಸ್ಮರಿಸಿ, ಶಿಕ್ಷಣ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಸಂಸ್ಥೆಯ ನಿರಂತರ ಕೊಡುಗೆಯನ್ನು ಶ್ಲಾಘಿಸಿದರು. ತಮ್ಮ ಗುರುವಾದ, ಕರ್ನಾಟಕದ ಜನಪದ ಸಂಗೀತದ ಪ್ರಖ್ಯಾತ ಕಲಾವಿದ ಸಿ. ಆರ್. ಅಶ್ವತ್ ಅವರನ್ನು ಬೆಳೆಸುವಲ್ಲಿ ಎಪಿಎಸ್ ಸಂಸ್ಥೆಗಳ ಪಾತ್ರವನ್ನು ನೆನಪು ಮಾಡಿಕೊಂಡರು.

ಎಪಿಎಸ್ ಸಂಸ್ಥೆಗಳ ಅಧ್ಯಕ್ಷರಾದ ಸಿಎ. ಡಾ. ವಿಷ್ಣು ಭರತ್ ಅಲಂಪಲ್ಲಿ ಮಾತನಾಡಿ., ಕನ್ನಡ ನಾಡಿನಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ ಜನ್ಮವೆತ್ತಿರುವುದು ನಿಜವಾದ ಭಾಗ್ಯ. ಬೆಂಗಳೂರು “ಭೂಲೋಕದಸ್ವರ್ಗ”. ಕರ್ನಾಟಕ ನಿರ್ಮಾಣಕ್ಕೆ ಕಾರಣಕರಾದ ಆಲೂರು ವೆಂಕಟರಾಯರ ಕೊಡುಗೆ ಅಪಾರ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರೊ. ಎ. ಪ್ರಕಾಶ್, ಪ್ರಾಂಶುಪಾಲರಾದ ಪರಮೇಶ – ಎಪಿಎಸ್ ಕಾಲೇಜ್ ಆಫ್ ಕಾಮರ್ಸ್, ಭಾಗ್ಯಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.