ಗುಗ್ಗರಹಟ್ಟಿಯ ವಾಟರ್ ಟ್ಯಾಂಕ್ ಬಳಿ ಮಹಾನಗರ ಪಾಲಿಕೆಯ ವತಿಯಿಂದ ಆರಂಭಿಸಲಾಗಿರುವ ಶ್ವಾನ ಸಂತಾನ ನಿಯಂತ್ರಣ ಹಾಗೂ ಕಲ್ಯಾಣ ಕೇಂದ್ರ ಉದ್ಘಾಟಿಸಿ ಮಾತನಾಡಿ,
ಬಳ್ಳಾರಿ ನಗರವೊಂದರಲ್ಲೇ ಅಂದಾಜು 25 ಸಾವಿರ ಶ್ವಾನಗಳು ಇವೆ, ಶ್ವಾನಗಳ ದಾಳಿ, ಕಡಿತದಿಂದ ರೇಬಿಸ್ ಖಾಯಿಲೆ ಹರಡಿ ಸಾಕಷ್ಟು ಸಮಸ್ಯೆ ಆಗಿತ್ತು, ಈಗ ಮಹಾನಗರ ಪಾಲಿಕೆ ಈ ಸಮಸ್ಯೆ ನಿವಾರಿಸಲು ದಿಟ್ಟ ಹೆಜ್ಜೆ ಇಟ್ಟಿದೆ, ಅಧಿಕಾರಿಗಳು - ಮೆಯರ್ ಅವರ ಕಾರ್ಯ ಶ್ಲಾಘನೀಯ ಎಂದರು.

ಎನ್ ಎಂಡಿಸಿ ಸಹಯೋಗದಲ್ಲಿ ಈ ಶ್ವಾನ ಸಂತಾನ ನಿಯಂತ್ರಣ ಮತ್ತು ಕಲ್ಯಾಣ ಕೇಂದ್ರ ನಿರ್ಮಿಸಲಾಗಿದೆ, ಅಂದಾಜು ೨೫ ಲಕ್ಷ ರೂ.ಗಳಲ್ಲಿ ಕಟ್ಟಡ ನಿರ್ಮಿಸಲಾಗಿದ್ದು, ಕೇಂದ್ರದ ನಿರ್ವಹಣೆಗೆ ೮೦ ಲಕ್ಷ ರೂ.ಗಳನ್ನು ಖರ್ಚು ಮಾಡಲಾಗುವುದು, ಆಸ್ರಾ ಎಂಬ ಸಂಸ್ಥೆಯವರಿಗೆ ಈ ಗುತ್ತಿಗೆ ನೀಡಲಾಗಿದೆ ಎಂದು ಹೇಳಿದ ಅವರು, ಆಸ್ರಾ ಸಂಸ್ಥೆಯವರು ಅಂದಾಜು ೭ ಸಾವಿರ ಶ್ವಾನಗಳಿಗೆ ಸಂತಾನ ನಿಯಂತ್ರಣ ಶಸ್ತ್ರ ಚಿಕಿತ್ಸೆ ಮಾಡಲಿದ್ದಾರೆ ಎಂದರು.
ಶ್ವಾನಗಳ ಹಾವಳಿ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿದ್ದವು, ಈ ಬಗ್ಗೆ ಪಾಲಿಕೆಯ ಪ್ರತಿ ಸಾಮಾನ್ಯ ಸಭೆಯಲ್ಲಿ ಚರ್ಚೆ ಆಗಿತ್ತು, ಈಗ ಕಾರ್ಯ ರೂಪಕ್ಕೆ ಬಂದಿದೆ ಎಂದು ಹೇಳಿದ ಶಾಸಕ ನಾರಾ ಭರತ್ ರೆಡ್ಡಿ, ಮಹಾನಗರ ಪಾಲಿಕೆ ಹಾಗೂ ಆಸ್ರಾ ಸಂಸ್ಥೆಯವರಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭ ಹಾಜರಿದ್ದು ಮಾತನಾಡಿದ ಮೇಯರ್ ಮುಲ್ಲಂಗಿ ನಂದೀಶ್, ಮೂರು ವರ್ಷಗಳಿಂದ ನಗರದಲ್ಲಿ ಶ್ವಾನಗಳ ಹಾವಳಿ ಮಿತಿ ಮೀರಿತ್ತು, ಶ್ವಾನ ನಿಯಂತ್ರಣ ಮಾಡುವ ಪ್ರಯತ್ನ ಇಂದು ಕಾರ್ಯ ರೂಪಕ್ಕೆ ಬಂದಿದೆ, ಈ ಕೇಂದ್ರದಲ್ಲಿ ಶ್ವಾನಗಳ ಸಂತಾನ ನಿಯಂತ್ರಣ ಶಸ್ತ್ರ ಚಿಕಿತ್ಸೆ ಹಾಗೂ ರೇಬಿಸ್ ಸೋಂಕು ನಿರೋಧಕ ಲಸಿಕೆ ನೀಡಲಾಗುವುದು, ಸಾರ್ವಜನಿಕರ ಅನುಕೂಲಕ್ಕಾಗಿ ಟೋಲ್ ಫ್ರೀ ಸಂಖ್ಯೆ ನೀಡಲಾಗುವುದು, ಈ ಕಾರ್ಯ ನಿರ್ಣಾಯಕ ಹಂತ ತಲುಪಲು ಶಾಸಕರ ಸಹಕಾರವೇ ಕಾರಣ ಎಂದರು.
ಈ ಸಂದರ್ಭ ಪಾಲಿಕೆಯ ಸದಸ್ಯರಾದ ಮಿಂಚು ಸೀನಾ, ಕಾಂಗ್ರೆಸ್ ಮುಖಂಡರಾದ ಡಿ.ಸೂರಿ, ಸುಬ್ಬರಾಯುಡು, ನಾಗಲಕೆರೆ ಗೊವಿಂದ, ಗುಗ್ಗರಹಟ್ಟಿ ಅನ್ವರ್, ಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿ ಮುನಾಫ್ ಪಟೇಲ್, ಆಸ್ರಾ ಸಂಸ್ಥೆಯ ವಿನಯ್ ಮೊದಲಾದವರು ಹಾಜರಿದ್ದರು.