ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಯಾವುದೇ ಹೇಳಿಕೆ ನೀಡಲಿ, ಅದು ತಪ್ಪಾಗಿದ್ದರೆ, ಮುಜುಗರವಾಗುವ ರೀತಿಯಲ್ಲಿದ್ದರೆ, ಶೋಕಾಸ್ ನೋಟಿಸ್ ಕಾಲಾವಕಾಶ ನೀಡಬಹುದಿತ್ತು, ಏಕಾಏಕಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೆ.ಎನ್.ರಾಜಣ್ಣ ಅವರನ್ನು ಸಂಪುಟದಿಂದ ವಜಾಗೊಳಿಸಿರುವುದು ಅತ್ಯಂತ ಖಂಡನೀಯ,
ಇದು ಅವರಿಗಷ್ಟೇ ಅಲ್ಲ, ಇಡೀ ವಾಲ್ಮೀಕಿ ಸಮಾಜಕ್ಕೆ ಮಾಡಿದ ಅಪಮಾನವಾಗಿದೆ. ಮಾಜಿ ಸಚಿವ ಬಿ.ನಾಗೇಂದ್ರ ಅವರು ಏನೂ ತಪ್ಪು ಮಾಡದಿದ್ದರೂ ಅವರನ್ನು ಒತ್ತಾಯದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಪಡೆದರು. 178 ಕೋಟಿ ವಾಲ್ಮೀಕಿ ಅಭಿವೃದ್ದಿ ನಿಗಮದ ಹಗರಣ ಅಂದ್ರೆ, ಹಣಕಾಸು ಇಲಾಖೆ ಸಿ.ಎಂ.ಸಿದ್ದರಾಮಯ್ಯ ಅವರ ಬಳಿಯೇ ಇದೆ, ಇವರ ಗಮನಕ್ಕೆ ಬಾರದೇ ಎಲ್ಲವನ್ನೂ ಬಿ.ನಾಗೇಂದ್ರ ಅವರ ಮೇಲೆ ಹೊರೆಸಿ ಅವರಿಂದಲೂ ರಾಜ್ಯ ಕಾಂಗ್ರೆಸ್ ಸರ್ಕಾರದ ಸಿ.ಎಂ.ಸಿದ್ದರಾಮಯ್ಯ ಅವರು ಒತ್ತಾಯದ ಮೂಲಕ ರಾಜೀನಾಮೆ ಪಡೆದರು, ಇದು ಅತ್ಯಂತ ಖಂಡನೀಯ. ಇಬ್ಬರಿಗೂ ಮತ್ತೆ ಸಚಿವ ಕೂಡಲೇ ಕಲ್ಪಿಸಬೇಕು, ನಿರ್ಲಕ್ಷಿಸಿದರೆ ಹೋರಾಟದ ಸ್ವರೂಪ ಬದಲಾಗಲಿದೆ ಎಂದು ಎಚ್ಚರಿಸಿದರು.

ಕಳೆದ 40 ವರ್ಷಗಳಿಂದ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ರಾಜಕಾರಣ ಮಾಡುತ್ತಾ ಬಂದಿರುವ ಕೆ.ಎನ್.ರಾಜಣ್ಣ ಅವರು, ಎಂತಹ ಸಂದರ್ಭ ಬಂದರು ಸಿ.ಎಂ.ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಿದ್ದಾರೆ, ಇದ್ದುದ್ದನ್ನೇ ಇದ್ದ ಹಾಗೆ ಮಾತನಾಡುವ ಸ್ವಭಾವ ರಾಜಣ್ಣ ಅವರದ್ದು, ಯಾರ ಮುಲಾಜಿಗೆ, ಬೀಳದೇ ನೇರವಾಗಿ ಮಾತನಾಡುವ ಸ್ವಭಾವ ಅವರದ್ದು, ಹೈಕಮಾಂಡ್ ನಿಂದಾ ಒತ್ತಡ ಬಂದ್ರೆ, ರಾಜಣ್ಣ ಅವರ ಬೆನ್ನಿಗೆ ಸಿ.ಎಂ.ಸಿದ್ದರಾಮಯ್ಯ ಅವರು ನಿಲ್ಲಬೇಕಿತ್ತು. ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ಬಲಿ ಪಶು ಮಾಡಲಾಯಿತು. ಇಂದಿನ ಸರ್ಕಾರದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಇದೆ ರೀತಿ ಮಾಡಿ ರಾಜಕೀಯ ಭವಿಷ್ಯ ಹಾಳು ಮಾಡಿದ್ರು, ಮಾಜಿ ಸಚಿವ ಬಿ.ಶ್ರೀರಾಮುಲು ಅವರನ್ನು ಡಿಸಿಎಂ ಮಾಡಲಾಗುವುದು ಎಂದು ಈ ಹಿಂದೆ ಬಿಜೆಪಿ ಅವರು ಭರವಸೆ ನೀಡಿ, ಪುಕ್ಕಟೆ ಪ್ರಚಾರ ಪಡೆದರು, ನಂತರ ಆರೋಗ್ಯ ಖಾತೆ ಕೊಟ್ರು, ಎಲ್ಲ ಪಕ್ಷಗಳೂ ನಮ್ಮ ವಾಲ್ಮೀಕಿ ಸಮಾಜದ ನಾಯಕರನ್ನು ಪರೋಕ್ಷವಾಗಿ ಬೆಳೆಯಲು ಬಿಡುತ್ತಿಲ್ಲ, ಇದೆ ರೀತಿ ಮುಂದುವರೆದರೆ ಸಮಾಜ ಇಡಿ ರಾಜ್ಯಾದ್ಯಂತ ಸಿಡಿದೇಳಲಿದೆ ಎಂದು ಎಚ್ಚರಿಸಿದರು. ಯುವ ಮುಖಂಡ ಜೋಳದರಾಶಿ ತಿಮ್ಮಪ್ಪ, ನ್ಯಾಯವಾದಿ ಜಯರಾಂ, ಮುಖಂಡ ಶಿವಕುಮಾರ್ ಅವರು ಮಾತನಾಡಿ, ಕೆ.ಎನ್.ರಾಜಣ್ಣ ಹಾಗೂ ಬಿ.ನಾಗೇಂದ್ರ ಅವರಿಗೆ ಕೂಡಲೇ ಸಚಿವ ಸ್ಥಾನ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಕೆ.ಹನುಮಂತಪ್ಪ, ಹನುಮಂತಪ್ಪ, ಗೋಪಾಲ್ ಸೇರಿದಂತೆ ಇತರರಿದ್ದರು.