ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಹಾಜರಾದ ಡಾ. ರಮೇಶ್ ಚಂದ್ರಹಾಸ್, ಸಹಾಯಕ ಪ್ರಾಧ್ಯಾಪಕರು, IMS, ದಾವಣಗೆರೆ ವಿಶ್ವವಿದ್ಯಾಲಯ, ಮಾತನಾಡಿ – “ಭವಿಷ್ಯದಲ್ಲಿ MBA ಪದವೀಧರರಿಗೆ ಅಪಾರ ಅವಕಾಶಗಳಿವೆ. ಆದರೆ ಅದಕ್ಕಾಗಿ ಬೇಕಾದ ತಜ್ಞತೆ, ಉದ್ಯಮ ಕ್ಷೇತ್ರಕ್ಕೆ ಬೇಕಾದ ಕೌಶಲ್ಯಗಳು ಹಾಗೂ ನಿರಂತರ ಕಲಿಕೆಯ ಮನೋಭಾವವನ್ನು ಹೊಂದಿರಬೇಕು” ಎಂದು ತಿಳಿಸಿದರು. ಉದ್ಯಮ ಮತ್ತು ನಿಗಮ ಕ್ಷೇತ್ರದಲ್ಲಿ ಅಗತ್ಯವಿರುವ ಕೌಶಲ್ಯಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಅವರು ಪ್ರೇರಣೆ ನೀಡಿದರು.

ನಿರ್ವಹಣಾ ವಿಭಾಗದ ಮುಖ್ಯಸ್ಥರಾದ ಡಾ. ವೆಂಕಟೇಶ್ ಬಾಬು ಎಸ್ ಪ್ರಾಸ್ತಾವಿಕ ಭಾಷಣ ಮಾಡಿ, “ಇಂದಿನ ವಿದ್ಯಾರ್ಥಿಗಳು ಕೇವಲ ಪಠ್ಯ ಜ್ಞಾನಕ್ಕಿಂತ ಹೆಚ್ಚಿನ ಪ್ರತಿಭೆ ಹಾಗೂ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಬೇಕು. ನಿರ್ವಹಣಾ ಕ್ಷೇತ್ರವು ನಿರೀಕ್ಷಿಸುವ ಸಾಮರ್ಥ್ಯಗಳನ್ನು ತಾವು ಹೊಂದಿದಾಗ ಮಾತ್ರ ಯಶಸ್ಸು ಸಿಗುತ್ತದೆ” ಎಂದು ಹೇಳಿದರು.
IQAC ಸಂಯೋಜಕರಾದ ಡಾ. ಗುರುರಾಜ್ ಜೆ.ಪಿ ಮಾತನಾಡಿ, “ಅಧ್ಯಯನದ ಜೊತೆಗೆ ಪೂರಕ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳ ವ್ಯಕ್ತಿತ್ವದ ಸಮಗ್ರ ಬೆಳವಣಿಗೆ ಸಾಧ್ಯವಾಗುತ್ತದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷರಾಗಿ ಮಾತನಾಡಿದ ಪ್ರಾಚಾರ್ಯ ಪ್ರೊ. ಬಸವರಾಜ್ ಸಿ ತಹಶೀಲ್ದಾರ, “ಕಾಲೇಜಿನಲ್ಲಿರುವ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಂಡು ಜ್ಞಾನ ಹಾಗೂ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಿ. ಅದು ನಿಮ್ಮ ಭವಿಷ್ಯ ನಿರ್ಮಾಣಕ್ಕೆ ಮುಖ್ಯ” ಎಂದು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.
ಕಾರ್ಯಕ್ರಮದಲ್ಲಿ ನಿರ್ವಹಣ ಶಾಸ್ತ್ರದ ಅಧ್ಯಾಪಕರಾದ ಪ್ರೊ ವಿನಾಯಕ್ ಪ್ರಭಾಕರ್ ಪ್ರೊ ನಾಗರಾಜ್ ಹೊಂಡೇಕರ್ ಪ್ರತಿಭಾ ಪ್ರೊ ರಾಧಾ ರವರನ್ನು ಶಿಕ್ಷಕರ ದಿನಾಚರಣೆ ಪ್ರಯುಕ್ತ ಸನ್ಮಾನಿಸಲಾಯಿತು ಪ್ರೊ ನಾಗೇಂದ್ರ ನಾಯಕ್ ಪ್ರೊ ರೆಹ್ಮಾನ್ ಸಾಬ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು
ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಅನುಷಾ ಬಿ.ಜೆ ನಿರ್ವಹಿಸಿದರು. ಹಾಲೇಶ್ ಬಿ ಪ್ರಾರ್ಥನೆ ಸಲ್ಲಿಸಿದರು. ನಾಗರಾಜ್ ಜಿ ಸ್ವಾಗತಿಸಿ, ಗೌರಿ ಜೆ.ಸಿ ಧನ್ಯವಾದ ಅರ್ಪಿಸಿದರು.