ವಿಜಯನಗರ : ವಿಜಯನಗರ ವಾಸವಿ ಶಿಕ್ಷಣ ಸಂಸ್ಥೆಗಳ ಸಮೂಹದಿಂದ 2025-26ಸಾಲಿನಲ್ಲಿ ಪಿ.ಯು.ಸಿ. ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ಸ್ವಾಗತ ಕೋರಲು ಫ್ರೆಶರ್ಸ್ ಡೇ ಆಚರಿಸಲಾಯಿತು.
ವಾಸವಿ ಶಿಕ್ಷಣ ಸಂಸ್ಥೆಗಳ ಸಮೂಹದ ಗೌರವ ಕಾರ್ಯದರ್ಶಿ ಡಿ.ಆರ್.ವಿಜಯಸಾರಥಿ. ಹಾಸ್ಯನಟರುಗಳಾದ ರಾಘವೇಂದ್ರ, ಹುಲಿ ಕಾರ್ತಿಕ್ ಮತ್ತು ಪ್ರಾಂಶುಪಾಲರಾದ ಪದ್ಮಾ, ಸೌಭಾಗ್ಯ, ಡಾ.ರಂಗಸ್ವಾಮಿ, ರಚನಾ ದೀಪ ಫ್ರೆಶರ್ಸ್ ಡೇ ಉದ್ಘಾಟಿಸಿದರು. ದ್ವೀತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಸನ್ಮಾನಿಸಲಾಯಿತು

ಡಿ.ಆರ್.ವಿಜಯಸಾರಥಿ ಮಾತನಾಡಿ, ಪ್ರತಿಯೊಬ್ಬರೂ ವಿದ್ಯಾವಂತರಾಗಬೇಕು. ಕೆ.ಜಿ.ಯಿಂದ ಪಿ.ಜಿ.ವರಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಗುಣಮಟ್ಟದ ಶಿಕ್ಷಣದ ಜೊತೆಗೆ ಕಲಿಕೆ ನಂತರ ನಮ್ಮ ಶಿಕ್ಷಣ ಸಂಸ್ಥೆ ಆವರಣದಲ್ಲಿ ಬೃಹತ್ ಉದ್ಯೋಗ ಮೇಳಗಳನ್ನು ಆಯೋಜಿಸಿ ಈ ವರೆಗೆ 5000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕಿಸಿಕೊಟ್ಟಿದ್ದೇವೆ. ವಾಸವಿ ಶಿಕ್ಷಣ ಸಂಸ್ಥೆಯನ್ನು ಮನೆಯ ವಾತವರಣದಂತೆ ರೂಪಿಸಲಾಗಿದೆ. ಎಂದರು.
ನಲಿ-ಕಲಿ ವಾತಾವರಣದಲ್ಲಿ ಒತ್ತಡವಿಲ್ಲದೆ ಶಿಕ್ಷಣ ನೀಡಲಾಗುತ್ತಿದೆ. ಮಕ್ಕಳು ಶಿಕ್ಷಣದ ಮಹತ್ವ ಅರಿಯಬೇಕು. ವಿದ್ಯಾವಂತ ಸಮಾಜ ನಿರ್ಮಾಣ ಮಾಡಬೇಕು, ಶಿಕ್ಷಣ ಪಡೆದಾಗ ಜ್ಞಾನ ಮತ್ತು ಅರಿವು ಮೂಡುತ್ತದೆ. ವಿದ್ಯಾವಂತ ಸಮಾಜದಿಂದ ಮಾತ್ರ ದೇಶ ಅಭಿವೃದ್ದಿ ಸಾಧ್ಯ ಎಂದು ಹೇಳಿದರು.
ಹಾಸ್ಯನಟ ರಾಘವೇಂದ್ರ ಮಾತನಾಡಿ, ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುದನ್ನು ತಿಳಿಯಲು ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು. ಮತ್ತೊಬ್ಬರ ಕಲಿಕೆಗೆ ನೆರವಾಗಬೇಕು. ಜ್ಞಾನವನ್ನು ಹಂಚಬೇಕು ಎಂದರು.

ಹುಲಿ ಕಾರ್ತಿಕ್ ಮಾತನಾಡಿ, ಆರ್ಥಿಕವಾಗಿ ಸಂಕಷ್ಟದಲ್ಲಿರುವವರು ಬೆಳಗ್ಗೆ ಕೆಲಸ ಮಾಡಿ ಸಂಜೆ ಕಾಲೇಜಿಗೆ ಹೋಗುವ ಅವಕಾಶವಿದೆ. ವಿದ್ಯೆ ಎಷ್ಟು ಮುಖ್ಯ ಎಂಬುದನ್ನು ಮಕ್ಕಳಿಗೆ ತಿಳಿಸಬೇಕು. ಎಲ್ಲ ಕಳೆದುಹೋಗಬಹುದು, ವಿದ್ಯೆ ಮಾತ್ರ ಶಾಶ್ವತವಾಗಿ ಇರುತ್ತದೆ. ಪುಸ್ತಕ ಓದುವುದು, ಸಂಗೀತ ಮತ್ತು ಮಹನೀಯರುಗಳ ಸಾಧಕರ ವಿಷಯಗಳನ್ನು ಮಕ್ಕಳಿಗೆ ತಿಳಿಸಿಕೊಡಿ ಎಂದು ಕರೆ ನೀಡಿದರು.