ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಡಾ.ಪ್ರಣತಿ ಕಾರ್ತೀಕ್, ಡಾ.ಹರೀಶ್ ಪಿ., ಡಾ.ಮಾಣಿಕ್ ರಾವ್ ಇನ್ನಿತರರು ಬೋಧನಾ ವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಲ್ಲಿ ಕಂಡುಬರುವ ಮೂಳೆ - ಸ್ನಾಯು ಸಂಬAಧಿತ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು ನಮ್ಮ ಉದ್ದೇಶವಾಗಿದೆ. ಹೀಗಾಗಿ ಈ ಶಿಬಿರದಲ್ಲಿ ಭಾಗವಹಿಸುವವರಿಗೆ
ತಜ್ಞ ಫಿಸಿಯೋಥೆರಪಿಸ್ಟ್ರಿಂದ ಉಚಿತ ಸಮಾಲೋಚನೆ ನಡೆಸಲಾಗುತ್ತದೆ. ಸೂಕ್ತ ಚಿಕಿತ್ಸಾ ಮಾರ್ಗದರ್ಶನ ಲಭ್ಯವಿರುತ್ತದೆ ಎಂದರು.

ಬಹಳಷ್ಟು ಜನರು ತಮ್ಮ ದೈನಂದಿನ ಜೀವನದಲ್ಲಿ ನೋವನ್ನು ಸಹಜವೆಂದು ಭಾವಿಸುತ್ತಾರೆ. ಆದರೆ ನೋವು ಎಂದರೆ ದೇಹವು "ಏನೋ ತಪ್ಪಾಗಿದೆ. ಗಮನ ಕೊಡಿ" ಎಂಬ ಸಂದೇಶವನ್ನು ನೀಡುತ್ತಿರುವುದು. ನೋವಿನ ಮೂಲ ಕಾರಣ ತಿಳಿಯದೆ ಕಂಗೆಡುವವರಿಗೂ, ಸೂಕ್ತ ಪರಿಹಾರ ಹುಡುಕುತ್ತಿರುವವರಿಗೂ ಫಿಸಿಯೋಥೆರಪಿ ಸರಿಯಾದ ದಾರಿ ಆಗಿದೆ.
ಹೀಗಾಗಿ ಈ ಅವಕಾಶವನ್ನು ಎಲ್ಲರೂ ಉಪಯೋಗಿಸಿಕೊಂಡು, ನಿಮ್ಮ ನೋವನ್ನು ಪರಿಶೀಲಿಸಿಕೊಳ್ಳಬೇಕು ಹಾಗೂ ಚಿಕಿತ್ಸೆ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಡಾ.ಜಯಲಕ್ಷಿö್ಮ, ಡಾ.ರಾಕೇಶ್ ಬಿ.ಎಂ., ಡಾ.ಅಖಿಲ್ ರಾವ್ ಮತ್ತು ಡಾ.ಬಾಲನಾಗಶಿವ ಇನ್ನಿತರರು ಇದ್ದರು.