
ಇದೇ ಸಂದರ್ಭದಲ್ಲಿ ಕಾರ್ಯದರ್ಶಿ ಡಿ.ಆರ್.ವಿಜಯಸಾರಥಿ ರವರು ಸರ್ವಪಲ್ಲಿ ರಾಧಕೃಷ್ಣನ್ ರವರು ರಾಷ್ಟ್ರಪತಿಗಳಾದರು ಶಿಕ್ಷಕ ವೃತಿಯನ್ನು ಮರೆಯಲ್ಲಿಲ, ಅವರ ಜನ್ಮದಿನಾಚರಣೆ ದಿನವನ್ನು ಶಿಕ್ಷಕರ ಮಹತ್ವ ತಿಳಿಯಲು ಶಿಕ್ಷಕರ ದಿನಾಚರಣೆ ಅಚರಿಸಲಾಗುತ್ತಿದೆ. ಶಿಕ್ಷಕ ಎಂದರೆ ವಿದ್ಯಾವಂತ ಸಮಾಜ ನಿರ್ಮಾಣ ಮಾಡುವ ವ್ಯಕ್ತಿತ್ವದವರು, ಗುರುಗಳನ್ನು ದೇವರೆಂದು ಭಾವಿಸುತ್ತಾರೆ. ಶಿಕ್ಷಕ ಇಲ್ಲವೆಂದರೆ ಸಮಾಜ ಎತ್ತ ಸಾಗುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ಶಿಕ್ಷಕರು ಮಕ್ಕಳ ಶಿಕ್ಷಣಕ್ಕೆ ಅವರು ಸಮಾಜದಲ್ಲಿ ಡೊಡ್ಡ ವ್ಯಕ್ತಿಗಳು ಆಗಬೇಕು ಎಂದು ಶ್ರಮಪಡುತ್ತಾರೆ. ಮಕ್ಕಳು ವಿದ್ಯಾವಂತರಾಗಿ ದೇಶ ಕಟ್ಟುವ ಕೆಲಸ ಮಾಡಿದಾಗ ಸಮಾಜದ ಅಭವೃದ್ದಿಯಾಗುತ್ತದೆ ಎಂದು ಹೇಳಿದರು.