ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಡಾ.ಪುರುಷೋತ್ತಮಗೌಡ ಅವರು ಈವೇಳೆ ಮಾತನಾಡಿ, ಬರಗಾಲ ಪೀಡಿತ ರೈತರಲ್ಲಿ ಕರವಸೂಲಿ, ಬ್ಯಾಂಕುಗಳ ಸಾಲ ಮರುಪಾವತಿಗೆ ಒತ್ತಾಯ, ಕರೆಂಟ್ ಮೀಟರ್ ಜಾರ್ಜ್ ಗಳಿಗೆ ಒತ್ತಾಯ, ರೈತರ ದನ ಕರುಗಳು, ದವಸ ಧಾನ್ಯಗಳ ಜಫ್ತಿ... ಈ ರೀತಿಯಾಗಿ ಸರ್ಕಾರವು ರೈತರ ಮೇಲೆ ದೌರ್ಜನ್ಯ ನಡೆಸಿತ್ತು. ಇದನ್ನು ಖಂಡಿಸಿ 1983 ರಲ್ಲಿ ಸರ್ಕಾರದ ವಿರುದ್ಧ ರೈತರು ಉಗ್ರ ಹೋರಾಟವನ್ನು ಆರಂಭಿಸಿದ್ದರು. ರೈತರ ಹೋರಾಟವನ್ನು ಹತ್ತಿಕ್ಕಲು ಸರ್ಕಾರ ಗೋಲಿಬಾರ್ ಮಾಡಿದಾಗ, ಅನೇಕ ರೈತರು ಗೋಲಿಬಾರಿಗೆ ಬಲಿಯಾಗಿ ಪ್ರಾಣ ಕಳೆದುಕೊಂಡಿದ್ದರು. ಹುತಾತ್ಮ ರೈತರ ಆತ್ಮಕ್ಕೆ ಶಾಂತಿ ಕೋರುವುದಕ್ಕಾಗಿ ಈ ದಿನ ಬಳ್ಳಾರಿ ನಗರದ ಮೋತಿ ಸರ್ಕಲ್ ನಲ್ಲಿರುವ ಬಸವಣ್ಣಪುತ್ಥಳಿಗೆ ಹಸಿರು ಶಾಲು ಹಾಕಿ, ಮಾಲಾರ್ಪಣೆ ಮಾಡಿ ಹುತಾತ್ಮ ರೈತರ ಸ್ಮರಣೆ ಮಾಡಿ ಗೌರವ ಸಲ್ಲಿಸಲಾಯಿತು ಎಂದರು.

ಈ ಸಂದರ್ಭದಲ್ಲಿ ಧುರೀಣರಾದ ಆರ್.ಎಚ್.ಎಂ. ಚನ್ನಬಸವಸ್ವಾಮಿ, ಕೆ.ಎಂ. ಮಹೇಶ್ವರ ಸ್ವಾಮಿ, ಕೊಳೂರು ಚಂದ್ರಶೇಖರ ಗೌಡ, ಗೌರಿಶಂಕರ ಸ್ವಾಮಿ, ಎಣ್ಣೆ ಎರಿಸ್ವಾಮಿ, ಬಂಡೆಗೌಡ, ನಾಗರಾಜ ಸ್ವಾಮಿ, ಶಿವಶಂಕರಗೌಡ, ವೀರಭದ್ರಯ್ಯ ಸ್ವಾಮಿ ಹಾಗೂ ಇತರೆ ರೈತರು ಇದ್ದರು.