LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News Districts

ರೈತ ಹುತಾತ್ಮ ದಿನಾಚರಣೆ : ಬಸವಣ್ಣನವರಿಗೆ ಮಾಲಾರ್ಪಣೆ

ಬಳ್ಳಾರಿ: 1983 ರಲ್ಲಿ ಮಹದಾಯಿ ನೀರಾವರಿ ಹೋರಾಟಕ್ಕಾಗಿ ನರಗುಂದ, ನವಲಗುಂದ ಭಾಗದಲ್ಲಿ ಆರಂಭಗೊಂಡ ರೈತ ಹೋರಾಟ ಹತ್ತಿಕ್ಕಲು ಅಂದಿನ ಸರ್ಕಾರ ಗೋಲಿಬಾರ್ ನಡೆಸಿದ್ದರಿಂದ ಅನೇಕ ರೈತರು ಹುತಾತ್ಮರಾಗಿದ್ದರು. ಈ ಹಿನ್ನೆಲೆಯಲ್ಲಿ ರೈತ ಹುತಾತ್ಮ ದಿನಾಚರಣೆಯನ್ನು ಬಳ್ಳಾರಿಯಲ್ಲಿ ಆಚರಿಸಲಾಗಿದ್ದು ತುಂಗಭದ್ರಾ ರೈತ ಸಂಘಟನೆಯಿAದ ಬಸವಣ್ಣನವರ ಪುತ್ಥಳಿಗೆ ಮಾಲಾರ್ಪಣೆ ಹಾಕಿ ಹುತಾತ್ಮ ರೈತರ ತ್ಯಾಗ, ಬಲಿದಾನವನ್ನು ಸ್ಮರಿಸಲಾಯಿತು.

ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಡಾ.ಪುರುಷೋತ್ತಮಗೌಡ ಅವರು ಈವೇಳೆ ಮಾತನಾಡಿ, ಬರಗಾಲ ಪೀಡಿತ ರೈತರಲ್ಲಿ ಕರವಸೂಲಿ, ಬ್ಯಾಂಕುಗಳ ಸಾಲ ಮರುಪಾವತಿಗೆ ಒತ್ತಾಯ, ಕರೆಂಟ್ ಮೀಟರ್ ಜಾರ್ಜ್ ಗಳಿಗೆ ಒತ್ತಾಯ, ರೈತರ ದನ ಕರುಗಳು, ದವಸ ಧಾನ್ಯಗಳ ಜಫ್ತಿ... ಈ ರೀತಿಯಾಗಿ ಸರ್ಕಾರವು ರೈತರ ಮೇಲೆ ದೌರ್ಜನ್ಯ ನಡೆಸಿತ್ತು. ಇದನ್ನು ಖಂಡಿಸಿ 1983 ರಲ್ಲಿ ಸರ್ಕಾರದ ವಿರುದ್ಧ ರೈತರು ಉಗ್ರ ಹೋರಾಟವನ್ನು ಆರಂಭಿಸಿದ್ದರು. ರೈತರ ಹೋರಾಟವನ್ನು ಹತ್ತಿಕ್ಕಲು ಸರ್ಕಾರ ಗೋಲಿಬಾರ್ ಮಾಡಿದಾಗ, ಅನೇಕ ರೈತರು ಗೋಲಿಬಾರಿಗೆ ಬಲಿಯಾಗಿ ಪ್ರಾಣ ಕಳೆದುಕೊಂಡಿದ್ದರು. ಹುತಾತ್ಮ ರೈತರ ಆತ್ಮಕ್ಕೆ ಶಾಂತಿ ಕೋರುವುದಕ್ಕಾಗಿ ಈ ದಿನ ಬಳ್ಳಾರಿ ನಗರದ ಮೋತಿ ಸರ್ಕಲ್ ನಲ್ಲಿರುವ ಬಸವಣ್ಣಪುತ್ಥಳಿಗೆ ಹಸಿರು ಶಾಲು ಹಾಕಿ, ಮಾಲಾರ್ಪಣೆ ಮಾಡಿ ಹುತಾತ್ಮ ರೈತರ ಸ್ಮರಣೆ ಮಾಡಿ ಗೌರವ ಸಲ್ಲಿಸಲಾಯಿತು ಎಂದರು.



ಈ ಸಂದರ್ಭದಲ್ಲಿ ಧುರೀಣರಾದ ಆರ್.ಎಚ್.ಎಂ. ಚನ್ನಬಸವಸ್ವಾಮಿ, ಕೆ.ಎಂ. ಮಹೇಶ್ವರ ಸ್ವಾಮಿ, ಕೊಳೂರು ಚಂದ್ರಶೇಖರ ಗೌಡ, ಗೌರಿಶಂಕರ ಸ್ವಾಮಿ, ಎಣ್ಣೆ ಎರಿಸ್ವಾಮಿ, ಬಂಡೆಗೌಡ, ನಾಗರಾಜ ಸ್ವಾಮಿ, ಶಿವಶಂಕರಗೌಡ, ವೀರಭದ್ರಯ್ಯ ಸ್ವಾಮಿ ಹಾಗೂ ಇತರೆ ರೈತರು ಇದ್ದರು. 

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ