ಬಳ್ಳಾರಿ : ಶಬರಿ ಮಲೈ ಅಯ್ಯಪ್ಪ ಸ್ವಾಮಿ ದೇವಾಲಯದ ದ್ವಾರಪಾಲಕ ವಿಗ್ರಹಗಳ ಚಿನ್ನ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಇಂದು ಬೆಂಗಳೂರಿನಿಂದ ಬಂದಿರುವ ಇಡಿ ಅಧಿಕಾರಿಗಳ ತಂಡ ನಗರದ ಬೆಂಗಳೂರು ರಸ್ತೆಯಲ್ಲಿನ ರೊದ್ದಂ ಜ್ಯೂವೆಲ್ಸ್ ಅಂಗಡಿ ಮೇಲೆ ದಾಳಿ ಮಾಡಿ, ಪರಿಶೀಲನೆ ನಡೆಸಿದ್ದಾರೆ.
ಈ ಅಂಗಡಿ ಮಾಲೀಕ ಗೋವರ್ಧನ ಅವರು ದೇವಸ್ಥಾನದ ಪ್ರಮುಖ ಅರ್ಚಕ ಉನ್ನಿಕೃಷ್ಣನ್ ಜೊತೆಗೆ ಸೇರಿ ಚಿನ್ನದ ದ್ವಾರ ಬಾಗಿಲು ನಿರ್ಮಾಣ ಮಾಡಿದ್ದರು. ಆಗ ನಾಲ್ಕುವರೆ ಕಿಲೋ ಚಿನ್ನ ನಾಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಗೋವರ್ಧನ ಅವರನ್ನು ಬಂದಿಸಿದ್ದಾರೆ ಕೇರಳದ ಎಸ್ಐಟಿ ಅಧಿಕಾರಿಗಳು.
ಇಡಿ ಅಧಿಕಾರಿಗಳು ಗೋವರ್ಧನ ಮನೆಯವರನ್ನು ಕರೆಸಿ ಅಂಗಡಿ ಬಾಗಿಲು ತೆಗೆಸಿ. ಜ್ಯೂವಲರಿ ನಲ್ಲಿ ಕೆಲಸ ಮಾಡೋ ಎಲ್ಲಾ ಸಿಬ್ಬಂದಿ ಕರೆಸಿ ವಿಚಾರಣೆ ನಡೆಸಿದ್ದಾರೆ.