ನಾಯಕನಹಟ್ಟಿ : ಪಟ್ಟಣದ ಬೆವಿಕಂ ಕಛೇರಿಯಲ್ಲಿ ಬುಧವಾರ ನಾಡ ಹಬ್ಬ ದಸರಾ ಆಚರಣೆಯ ನಿಮಿತ್ತ ಆಯುಧಪೂಜೆಯನ್ನು ಸಲ್ಲಿಸಲಾಯಿತು.
ಎಸ್.ಓ. ಬೋರಣ್ಣ ಮಾತನಾಡಿ ಜೀವನದಲ್ಲಿ ಯಾವಾಗಲೂ ಸರಿಯಾದುದ್ದಕ್ಕಾಗಿ ಹೋರಾಡುವ ಶಕ್ತಿಯನ್ನು ದೇವರು ನಮಗೆ ನೀಡಬೇಕು ಎಂದು ಮಾತನಾಡಿದರು.
ಈ ಸಂದರ್ಭದಲ್ಲಿ ಬೆವಿಕಂ ಇಲಾಖೆಯ ಸಿಬ್ಬಂದಿಗಳಿಗೆ ಆಯುಧಪೂಜೆ ಮತ್ತು ವಿಜಯದಶಮಿಯ ಶುಭಾಶಯಗಳನ್ನು ಕೋರಿದರು.
ಈ ಸಂದರ್ಭದಲ್ಲಿ ಬೆವಿಕಂ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.