ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾಯಕನಹಟ್ಟಿ ಸುತ್ತಮುತ್ತಲಿನ ಬಡ ರೈತರು ತಮ್ಮ ಜಮೀನುಗಳಿಗೆ ಸಾಲ ಸೋಲ ಮಾಡಿ ಬೆಳೆಗಳನ್ನು ಇಟ್ಟು ಇವರಿಗೆ ಗೊಬ್ಬರಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಪಟ್ಟಣದಲ್ಲಿರುವ ಗೊಬ್ಬರದ ಅಂಗಡಿಗಳಿಗೆ ಅಲೆದಾಡಿ ಯೂರಿಯಾ ಗೊಬ್ಬರ ಸಿಗದೇ ಸುಸ್ತಾಗಿ ಸರ್ಕಾರಕ್ಕೆ ಕೃಷಿ ಮಂತ್ರಿಗಳಿಗೆ ಸ್ಥಳೀಯ ಶಾಸಕರಿಗೆ ಮತ್ತು ಕೃಷಿ ಅಧಿಕಾರಿಗಳಿಗೆ ಇಡೀ ಶಾಪ ಹಾಕುತ್ತಿದ್ದಾರೆ. ರೈತರಿಗೆ ಸರಿಯಾದ ಸಮಯಕ್ಕೆ ಬೆಳೆದ ಬೆಳೆಗಳಿಗೆ ಗೊಬ್ಬರ ಕೊಡದಿದ್ದರೆ ಇಳುವರಿ ಕುಂಟಿತಗೊಂಡು ರೈತ ಸಾಲಗಾರನಾಗಿ ಸಾಯುವಂತ ಪರಿಸ್ಥಿತಿ ಎದುರಾಗಬಹುದು. ಇದಕ್ಕೆ ನೇರವಾಗಿ ಸರ್ಕಾರ ಮತ್ತು ಅಧಿಕಾರಿಗಳೇ ನೇರ ಹೊಣೆ ಯಾಗುತ್ತಾರೆ ಎಂದರು.
ಈ ಕ್ಷೇತ್ರದ ಶಾಸಕರಾದಂತಹ ಎನ್ ವೈ ಗೋಪಾಲಕೃಷ್ಣರವರು ಮಧ್ಯಪ್ರವೇಶಿಸಿ ರೈತರಿಗೆ ಆಗುವಂತಹ ಅನಾನುಕೂಲಗಳನ್ನು ಪರಿಶೀಲಿಸಿ, ತಕ್ಷಣದಿಂದಲೇ ಗೊಬ್ಬರ ವಿತರಣೆ ಯಾಗುವಂತೆ ನೋಡಿಕೊಳ್ಳಬೇಕು. ಶಾಸಕರು ರೈತರ ಸ್ಥಿತಿಗತಿಗಳನ್ನು ಅರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ನೀಡಬೇಕೆಂದು ಮನವಿ ಮಾಡಿದರು.ರೈತರಿಗೆ ನೇರವಾಗಿ ಸಮಯಕ್ಕೆ ಸರಿಯಾಗಿ ಗೊಬ್ಬರ ವಿತರಣೆ ಮಾಡದೆ ಹೋದರೆ ನಾಡಕಚೇರಿಯ ಬಳಿ ಸರ್ಕಾರದ ವಿರುದ್ಧ ಭ್ರಷ್ಟ ಅಧಿಕಾರಿಗಳ ವಿರುದ್ಧ ರೈತರಿಗೆ ಸಮರ್ಪಕವಾಗಿ ಗೊಬ್ಬರ ಸಿಗುವವರೆಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ( ಡಾ. ವಾಸುದೇವ ಮೇಟಿ) ಬಣ ಧರಣಿ ಮಾಡಲಾಗುವುದೆಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಓ. ಮಂಜುನಾಥ್ ಗೌಡಗೆರೆ ಗೌರವಾಧ್ಯಕ್ಷರು , ಕೆಎಂ ಮಂಜುನಾಥ್ ಕಾರ್ಯದರ್ಶಿ, ಸಿ ಎಸ್ ರಾಘವೇಂದ್ರ, ಸಂಜೀವಿನಿ ಪ್ರಸನ್ ಕುಮಾರ್ ಮಲ್ಲೂರಹಳ್ಳಿ, ಬಸವರಾಜ್ ಮಾದೇವಪುರ, ಜಿಲ್ಲಾ ಕಾರ್ಯದರ್ಶಿ ನವೀನ್ ಮದಕರಿ, ತಿಪ್ಪೇಸ್ವಾಮಿ ದಲಿತ ಮುಖಂಡರು ನಾಯಕನಹಟ್ಟಿ, ತಿಪ್ಪೇಸ್ವಾಮಿ , ತಿಪ್ಪಣ್ಣ , ಸೂರಯ್ಯ, ಮಂಜಣ್ಣ , ಮಹಾಂತೇಶ್ , ಓಬಯ್ಯ. ಬೋರಣ್ಣ ಸೇರಿದಂತೆ ಇನ್ನು ಅನೇಕ ಸುತ್ತಮುತ್ತಲಿನ ರೈತ ಮುಖಂಡರು ನೊಂದ ರೈತರು ಭಾಗವಹಿಸಿದ್ದರು.