ಮರಿಯಮ್ಮನಹಳ್ಳಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾರ್ಮಿಕ ಇಲಾಖೆ, ಕಾರ್ಖಾನೆ ಮತ್ತು ಬಾಯ್ಲರ್ಗಳ ಕೈಗಾರಿಕ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ ಹಾಗೂ ಬಿಎಂಎಂ ಇಸ್ಪಾತ್ ಡಣಾಪುರ ಇವರ ಸಂಯುಕ್ತಾಶ್ರಯದಲ್ಲಿ ವಿಜಯನಗರ ಜಿಲ್ಲಾ ವಿಶೇಷ ಚೇತನರಿಗೆ ಹಗರಿಬೊಮ್ಮನಹಳ್ಳಿ ಶಾಸಕ ಕೆ ನೇಮರಾಜ ನಾಯ್ಕ ರವರು ಶನಿವಾರ ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯಿತಿ ಆವರಣದಲ್ಲಿ ಮೋಟಾರು ಚಾಲಿತ ತ್ರಿಚಕ್ರ ವಾಹನಗಳನ್ನು ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ 20 ಜನ ವಿಶೇಷ ಚೇತನ ಫಲಾನುಭವಿಗಳಿಗೆ ತ್ರಿಚಕ್ರ ವಾಹನಗಳನ್ನು ನೀಡಿದರು. ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಾದಾಮಿ ಮೃತ್ಯುಂಜಯ, ಹ.ಬೊ.ಹಳ್ಳಿ ತಾಲೂಕು ಅಧ್ಯಕ್ಷ ವೈ ಮಲ್ಲಿಕಾರ್ಜುನ, ವಿಜಯನಗರ ಉಪ ವಿಭಾಗ ಕಾರ್ಮಿಕ ಅಧಿಕಾರಿ ಸೂರ್ಯಪ್ಪ ಐ ಡೊಂಬರಮತ್ತೂರ, ಪ.ಪಂ ಮುಖ್ಯಾಧಿಕಾರಿ ಗರಡಿ ಕಳಕ ಮಲ್ಲೇಶ, ಕಾರ್ಮಿಕ ನಿರೀಕ್ಷಕ ಗೋಪಾಲ ಬ ದೂಪದ್, ಬಿಎಂಎಂ ಕಂಪನಿ ಅಧಿಕಾರಿಗಳಾದ ಜಹಾಂಗೀರ, ಅರುಣ್, ಉಪತಹಶಿಲ್ದಾರ ಮಂಜುನಾಥ ಎಂ, ಜೆಡಿಎಸ್ ಹಿರಿಯ ಮುಖಂಡ ಪಾಂಡುರಂಗ ಶೆಟ್ಟಿ, ದೊಡ್ಡರಾಮಣ್ಣ, ಶ್ರೀಕಾಂತ, ಗುಂಡಾ ಸ್ವಾಮಿ, ಎಲೆಗಾರ ಮಂಜುನಾಥ, ಸಜ್ಜದ ವಿಶ್ವನಾಥ, ನಾಗೇಶ್, ಎಲ್ ದುರುಗಪ್ಪ, ರಾಘವೇಂದ್ರ ಇತರರಿದ್ದರು.