ಬೆಂಗಳೂರು : ನಗರದ ಬನ್ನೇರುಘಟ್ಟ ರಸ್ತೆಯ ದೊರೆಸಾನಿ ಪಾಳ್ಯ ಅಪೋಲೋ ಆಸ್ಪತ್ರೆ ಮುಂಭಾಗ ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ವತಿಯಿಂದ 70ನೇ ಕನ್ನಡ ರಾಜ್ಯೋತ್ಸವ ಅದ್ದೂರಿಯಾಗಿ ಆಚರಿಸಲಾಯಿತು.
ವೇದಿಕೆಯಲ್ಲಿ ಪೌರ ಕಾರ್ಮಿಕರಿಗೆ ಸೀರೆ ಹಾಗೂ ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ ವಿತರಿಸಲಾಯಿತು.
ಚಲನಚಿತ್ರ ನಟ, ನಿರ್ಮಾಪಕ, ಗಂಡಸಿ ಸದಾನಂದಸ್ವಾಮಿ. ಬೊಮ್ಮನಹಳ್ಳಿ ಯೂತ್ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ. ಮಿಥುನ್ ಗೌಡ. ಸ್ನೇಹಜೀವಿ ಅಧ್ಯಕ್ಷರು ಸ್ನೇಹಜೀವಿ ಸಂತೋಷ್ ಕುಮಾರ್. ಪ್ರಧಾನ ಕಾರ್ಯದರ್ಶಿ ರಾಜು ಕನ್ನಡಿಗ. ಜಾರ್ಜ್ ಫಾರ್ನಾಂಡಿಸ್. ರವಿ ಆರ್. ಬಾಲರಾಜ್. ಸತೀಶ್. ಮುತ್ತು ಕಲ್ಕೆರೆ. ಮರಿಯಪ್ಪ. ಕುಮಾರ್. ಅರುಣ್. ಶಿವು. ಮಂಜು. ದಂಡಪ್ಪ ಇನ್ನು ಅನೇಕ ಪದಾಧಿಕಾರಿಗಳು ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.