ಅವರು ಪಟ್ಟಣದ ಶ್ರೀಲಕ್ಷ್ಮೀನಾರಾಯಣಸ್ವಾಮಿ ಹಾಗೂ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ವೈಕುಂಠರಥವನ್ನು ಮುಕ್ತಿಧಾಮ ಸೇವಾ ಟ್ರಸ್ಟ್ ಗೆ ಹಸ್ತಾಂತರಿಸಿ ನಂತರ ಎರಡು ಆಂಬುಲೆನ್ಸ್ ಗಳಿಗೆ ಚಾಲನೆ ನೀಡಿ ಮಾತನಾಡಿ, ನಮ್ಮ ಬಿಎಂಎಂ ಕಂಪನಿಯಿಂದ ಸಿ.ಎಸ್.ಆರ್.ಅಡಿಯಲ್ಲಿ 28 ಲಕ್ಷ ದಿಂದ 30 ಲಕ್ಷದವರೆಗೆ ಒಂದೊಂದು ಅಂಬುಲೆನ್ಸ್ ನೀಡಲಾಗಿದೆ. ಸುಧಾರಿತ ತಂತ್ರಜ್ಞಾನದ (ಎ.ಎಲ್.ಎಸ್) ಅಂಬುಲೆನ್ಸ್ ಗಳನ್ನು ಎಲ್ಲಾ ಸಮುದಾಯದ ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು. ವೈಕುಂಠ ರಥದ ನಿರ್ವಹಣೆಯನ್ನು ಮುಕ್ತಿಧಾಮ ಸೇವಾ ಸಮಿತಿಯು ನಿರ್ವಹಿಸಲಿದೆ. ಈ ಸಮಿತಿಯು ಸ್ವ ಇಚ್ಚೆಯಿಂದ ಸೇವೆಗೆ ಮುಂದೆ ಬಂದಿದೆ. ಬಡಜನರ ಆರೋಗ್ಯ ತುರ್ತು ಸೇವೆಗೆ ಅನುಕೂಲಕ್ಕಾಗಿ, ಎರಡು ಆಂಬ್ಯುಲೆನ್ಸ್ ಗಳನ್ನು ಲೋಕಾರ್ಪಣೆ ಮಾಡಿದ್ದೇವೆ ಎಂದರು.

ಹೊಸ ಅಂಬ್ಯುಲೆನ್ಸ್ ಗಳು ಹೊಸ ಸುಧಾರಿತ ತಂತ್ರಜ್ಞಾನ ಹೊಂದಿದ ಆರೋಗ್ಯ ಚಿಕಿತ್ಸೆಯ ಸೌಲಭ್ಯಗಳನ್ನು ಹೊಂದಿವೆ. ಅಲ್ಲದೇ ಈ ಆಂಬುಲೆನ್ಸ್ ಗಳ ವ್ಯಾಪ್ತಿ ಸುಮಾರು 60 ಕಿಮೀ ವ್ಯಾಪ್ತಿಯ ಒಳಗಡೆ ಸೇವೆಯನ್ನು ನೀಡುತ್ತವೆ. ಮರಿಯಮ್ಮನಹಳ್ಳಿ ಆಸ್ಪತ್ರೆ, ಹೊಸಪೇಟೆ ಆಸ್ಪತ್ರೆ, ಬಳ್ಳಾರಿ ಆಸ್ಪತ್ರೆ, ಕೊಪ್ಪಳ ಆಸ್ಪತ್ರೆ ವರೆಗೂ ಸೇವೆ ದೊರೆಯುತ್ತವೆ. ಶೀಘ್ರದಲ್ಲೇ ಆಂಬ್ಯುಲೆನ್ಸ್ ಗಳ ಸಂಪರ್ಕದ ನಂಬರ್ ಗಳನ್ನು ಸಹ ಸಂಸ್ಥೆಯು ಪ್ರಕಟಿಸಲಿದೆ. ಸಾರ್ವಜನಿಕರು ಇವುಗಳಿಗೆ ಕರೆಮಾಡಿ ಸೇವೆ ಪಡೆಯಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಗೋವಿಂದರಾಜು, ಪರಶುರಾಮ, ಕೃಷ್ಣನಾಯ್ಕ, ಚಿದ್ರಿ ಸತೀಶ್, ವಿಶ್ವನಾಥ್ ಶೆಟ್ಟಿ, ರೋಗಣ್ಣನವರ ಮಂಜುನಾಥ, ಗರಗ ಪ್ರಕಾಶ್, ಸತ್ಯನಾರಾಯಣ ಶೆಟ್ಟಿ, ಕುಪ್ಪ ರಾಘವೇಂದ್ರ ಶೆಟ್ಟಿ, ಮಂಜುನಾಥ, ಸಿಡಿ.ಯಲ್ಲಪ್ಪ, ವಿಜಯ್ ಕುಮಾರ್, ಆನಂದ, ಕೃಷ್ಣ, ಸುರೇಶ್, ವಸಂತ, ನಿಂಗಪ್ಪ ಇತರರಿದ್ದರು.