ಸಿರುಗುಪ್ಪ : ಕೇಬಲ್ ಟಿ.ವಿ.ಯನ್ನು ಪ್ರಥಮದಿಂದಲೇ ಕಟ್ಟಿ ಬೆಳಸಿ, ಸುಮಾರು ಎರೆಡು ದಶಕಗಳಿಗೂ ಕಾಲ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ನಗರ ಕೇಂದ್ರದಲ್ಲಿ ಕೇಬಲ್ ಟಿ.ವಿ ನಡೆಸಿ ಉತ್ತರ ಕರ್ನಾಟಕ ಕೇಬಲ್ ಟಿ.ವಿ. ಆಪರೇಟರುಗಳ ಕ್ಷೇಮಾಭಿವೃದ್ಧಿ ಸಂಘ ಕಟ್ಟಿ ಉ.ಕ.ಕೇ.ಆ.ಸಂಘಧ ರಾಜ್ಯಾಧ್ಯಕ್ಷರಾಗಿ ಅಂದಿನ ದಿನಗಳಲ್ಲಿ ನ್ಯಾಯಯುತವಾಗಿ ಪೇ ಚಾನೆಲ್ ಗಳ ನಡೆಗೆ ಕಾರಣರಾದ ಜಿ.ಜಿ. ಕೃಪಾಕರ (ವಜ್ರಣ್ಣ) (ಅಂದಾಜು 80 ವರ್ಷ) ಗುರುವಾರ ತಡ ಸಂಜೆ ವೇಳೆ ಹೈದರಾಬಾದಿನಲ್ಲಿ ನಿಧನರಾಗಿದ್ದಾರೆ. ಶುಕ್ರವಾರ ಸಿರುಗುಪ್ಪ ನಗರಕ್ಕೆ ಅವರ ಪಾರ್ಥೀವ ಶರೀರ ತರಲಾಗಿದೆ. ನಗರದ ಸಿ.ಎಸ್.ಐ. ಚರ್ಚ್ (ಪ್ರಾರ್ಥನಾಲಯ) ವನ್ನು ಕಟ್ಟಿ ಬೆಳೆಸಲು ಅವರು ಗಣನೀಯ ಸೇವೆ ಸಲ್ಲಿಸಿದ್ದರು.
ಪತ್ನಿ, ಮೂರು ಹೆಣ್ಣು ಮಕ್ಕಳು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳು ಮತ್ತು ಮಿತ್ರರನ್ನು ಶ್ರೀಯುತರು ಅಗಲಿದ್ದಾರೆ. ಸಾವಿನ ಸುದ್ದಿ ಹರಡುತ್ತಿದ್ದಂತೆ ಅನೇಕರು ದಿಗ್ಭ್ರಮೆ ವ್ಯಕ್ತ ಪಡಿಸಿ ಸಾಂತ್ವನ ತಿಳಿಸಿದ್ದಾರೆ. ಸದಾಶಿವನಗರದ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಇವರ ಅಂತಿಮ ಕ್ರಿಯೆಗಳು ಕ್ರಿಶ್ಚಿಯನ್ ಸಂಪ್ರದಾಯದಂತೆ ಶನಿವಾರ ಬೆಳಿಗ್ಗೆ ಸಿರುಗುಪ್ಪ ನಗರದಲ್ಲಿ ನಡೆಯಲಿದೆ. ಅನೇಕರು ಮೃತರ ಸಾವಿಗೆ ಅತೀವ ಕಂಬನಿ ಮಿಡಿದಿದ್ದಾರೆ.