ನಾಯಕನಹಟ್ಟಿ : ಶ್ರೀ ಗುರು ತಿಪ್ಪೇರುದ್ರಸ್ವಾಮಿ ಸಂಸ್ಕೃತ ವೇದಪಾಠ ಶಾಲೆಯ ಶಿಕ್ಷಕರಾದ ವಿರೇಶ್ ಹಿರೆಮಠ್ ರವರು ವಿದ್ಯಾರ್ಥಿಯು ಮನೆಯವರಿಗೆ ಕರೆ ಮಾಡಿದ್ದಕ್ಕೆ ಇಷ್ಟೊಂದು ಕ್ರೂರವಾಗಿ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿರುವುದು ತುಂಬಾ ಸಂಕಟದ ವಿಷಯ. ಇಂತಹ ಆಯೋಗ್ಯನಿಗೆ ಕಠಿಣ ಶಿಕ್ಷೆಯಾಗಬೇಕು ಮತ್ತು ಶಾಲೆಯಿಂದ ವಜಾ ಮಾಡಬೇಕು. ಇಲ್ಲಿ ಸಂಸ್ಕೃತ ಶಾಲೆಯ ಅವಶ್ಯಕತೆ ಇದೆ ಏಕೆಂದರೆ ಇದು ಬುಡಕಟ್ಟು ಸಂಸ್ಕೃತಿಯ ಆರಾಧನೆಯ ಮಠ ಇಂತ ಸ್ಥಳದಲ್ಲಿ ಇಂತಹ ಶಿಕ್ಷಕರು ಇರಲು ಅನರ್ಹರಾಗಿದ್ದು, ಇದಕ್ಕೆ ಸಂಬಂಧಪಟ್ಟಂತ ಅಧಿಕಾರಿಗಳು ಇದರ ಬಗ್ಗೆ ಸೂಕ್ತ ಕಾನೂನು ಕ್ರಮ ವಹಿಸಿ ಸದರಿ ಶಿಕ್ಷಕನನ್ನು ಕೆಲಸದಿಂದ ಅಮಾನತು ಮಾಡಬೇಕೆಂದು ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ ಹೆಚ್.ಗಂಗಾಧರಪ್ಪನವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ಕುಮಾರ್ ಶೆಟ್ಟಿ ಬಣದ ವತಿಯಿಂದ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಪ್ರಕಾಶ್, ಉಪಾಧ್ಯಕ್ಷ ಓಂಕಾರಪ್ಪ, ಖಜಾಂಚಿ ಬೋರಯ್ಯ, ಉಮೇಶ್, ಸಂಚಾಲಕರು ಪ್ರಧಾನ ಕಾರ್ಯದರ್ಶಿ ಸುರೇಶ್, ಪದಾಧಿಕಾರಿಗಳಾದ ರಮೇಶ್, ಕಾಮಯ್ಯ, ತಿಪ್ಪೇಶ್ ಮತ್ತು ಸದಸ್ಯರುಗಳು ಇದ್ದರು.