
ಸಿದ್ದಪ್ಪ ಎಂಬುವರು ಈಗಾಗಲೇ ಜಮೀನು ನಮ್ಮದೇ ಎಂದು ಈಗಾಗಲೇ ಅನೇಕ ಬಾರಿ ಕೋರ್ಟಿಗೆ ಹೋಗಿದ್ದರು, ಕೋರ್ಟ್ ಇವರ ವಾದವನ್ನು ತಳ್ಳಿ ಹಾಕಿರುವಂತೆ ಕಂಡು ಬರುತ್ತಿದೆ.
1979ರಲ್ಲಿ ಈ ಜಮೀನು ಪಿ ಟಿ ಸಿ ಎಲ್ ನಿಯಮದಡಿ 5/1 ಬಿ ಅನ್ವಯ ಪರಿಶಿಷ್ಟ ಜಾತಿಗೆ ಮಂಜೂರಾದ ಈ ಜಮೀನನ್ನು ಯಾವುದೇ ಕಾರಣಕ್ಕೂ ಬೇರೆಯವರು ಪಡೆಯಲು ಅಥವಾ ಮಾರಲು ಸಾಧ್ಯವಾಗುವುದಿಲ್ಲ.
ಹಾಗೂ ಈ ಕುಟುಂಬದ ಬಡ ಹೆಣ್ಣು ಮಕ್ಕಳು ಕೂಲಿ ನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು ಒಂದು ವೇಳೆ ಇದೇ ರೀತಿ ಜಮೀನಿನಿಂದ ನಮಗೆ ದೌರ್ಜನ್ಯ ಎಸಗಿದರೆ ಸರ್ಕಾರವೇ ದಯಾಮರಣವನ್ನು ಕಲ್ಪಿಸಿ ಕೊಡಬೇಕೆಂದು ಜಮೀನಿನ ಮಾಲೀಕರಾದ ಶ್ರೀಮತಿ ಎಲ್ಲಮ್ಮ ಹಾಗೂ ಸಹೋದರಿಯರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದರು.

ಇ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಭೀಮಸೇನೆ ತಾಲೂಕು ಅಧ್ಯಕ್ಷ ಮಂಜುನಾಥ್ ಅಂಜನಪ್ಪ ಮಾತನಾಡಿ ತಿಪಟೂರು ತಾಲೂಕಿನಲ್ಲಿ ಈಗಾಗಲೇ ಇಂತಹ ಹಲವಾರು ಘಟನೆಗಳು ನಡೆಯುತ್ತಿದ್ದು ಸರ್ಕಾರವು ಈ ಕೂಡಲೇ ಇಂತಹ ದಲಿತರ ಮೇಲಿನ ದೌರ್ಜನಗಳನ್ನು ಖಂಡಿಸಿ ಸೂಕ್ತವಾದಂತಹ ನ್ಯಾಯವನ್ನು ಒದಗಿಸಿ ಕೊಡಬೇಕೆಂದು ಈ ಮೂಲಕ ಸರ್ಕಾರವನ್ನು ಅಗ್ರಹಿಸಿದರು.
ಒಂದು ವೇಳೆ ತಾಲೂಕು ಆಡಳಿತ ಇಂತಹ ಘಟನೆಗಳು ಪುನಾ ಮರುಕಳಿಸಿದರೆ ತಾಲೂಕು ಕಚೇರಿಯ ಮುಂದೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಇದೆ ವೇಳೆ ಅವರು ಎಚ್ಚರಿಕೆ ನೀಡಿದರು.
ಈಗಾಗಲೇ ಈ ವಿಚಾರವನ್ನು ಮುಖ್ಯಮಂತ್ರಿಗಳು ಗೃಹ ಸಚಿವರು ಪರಿಶಿಷ್ಟ ಜಾತಿಯ ಆಯೋಗ ಜಿಲ್ಲಾಧಿಕಾರಿ ಹಾಗೂ ಕಂದಾಯ ಸಚಿವರಿಗೂ ಕೂಡ ತಿಳಿಸಲಾಗಿದ್ದು ಈ ವಿಚಾರವಾಗಿ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು. ಎಂದರು.
ಇದೇ ವೇಳೆ ಅವರು ತಾಲೂಕು ತಹಸಿಲ್ದಾರ್ ಜಗನ್ನಾಥ್ ರವರಿಗೆ ಮನವಿ ಪತ್ರವನ್ನು ಕೂಡ ಸಲ್ಲಿಸಿದರು
ಪತ್ರಿಕಾಗೋಷ್ಠಿಯಲ್ಲಿ ಭಾಗ್ಯಮ್ಮ ನಾಗಮ್ಮ ಎಲ್ಲಮ್ಮ ಸುಮನ್ ಮೊದಲಾದವರು ಹಾಜರಿದ್ದರು