ಬ್ಯಾಂಕ್ ಅಧ್ಯಕ್ಷ ಡಿ.ಆರ್. ವಿಜಯಸಾರಥಿ ಸಹಕಾರಿ ಧ್ವಜಾರೋಹಣ ಮಾಡಿ ಸಹಕಾರ ದಿನಾಚರಣೆಯ ಶುಭ ಕೋರಿ, ಸಿಹಿ ವಿತರಿಸಿದರು.
ಸಹಕಾರ ಸಪ್ತಾಹದಿಂದ ಆತ್ಮನಿರ್ಭರ ಭಾರತ ಸಾಧನೆಗಾಗಿ ಸಹಕಾರ ಸಂಸ್ಥೆಗಳು ಕೊಡುಗೆ ಅಪಾರ. ಒಬ್ಬರಿಂದ ಇನ್ನೂಬ್ಬರಿಗೆ ಸಹಕಾರ ನೀಡುವ ಮೂಲಕ ಆರ್ಥಿಕವಾಗಿ ಅಭಿವೃದ್ದಿಯಾಗುವುದು ಸಹಕಾರ ತತ್ವ. ಶ್ರೀ ಸುಬ್ರಮಣ್ಯೇಶ್ವರ ಕೋ-ಅಪರೇಟಿವ್ ಬ್ಯಾಂಕ್ ಜನಸ್ನೇಹಿ ಬ್ಯಾಂಕ್ ಎಂಬ ಕೀರ್ತಿಗಳಿಸಿದೆ. ನಮ್ಮ ಬ್ಯಾಂಕ್ ನಲ್ಲಿ ಸಹಕಾರ ನಿಯಮಗಳನ್ನು ಚಾಚು ತಪ್ಪದೆ ಪಾಲಿಸಿದ ಕಾರಣದಿಂದ ಬ್ಯಾಂಕ್ ಲಾಭದಾಯದತ್ತ ಸಾಗುತ್ತಿದೆ ಎಂದರು.

ಬ್ಯಾಂಕ್ ಸಂಪೂರ್ಣ ಡಿಜಿಟಿಲೀಕರವಾಗಲಿದೆ ಮತ್ತು ಎಟಿಎಮ್ ಸೆಂಟರ್ ಆರಂಭಿಸಲಾಗುತ್ತಿದೆ. ಹಣ ಸದುಪಯೋಗವಾಗಲು ಬ್ಯಾಂಕ್ ನಲ್ಲಿ ಠೇವಣಿ ಇಡಬೇಕು. ಠೇವಣಿ ಹಣವನ್ನು ಸ್ವಯಂ ಉದ್ಯೋಗ ಮತ್ತು ಮನೆ ಕಟ್ಟುವವರಿಗೆ ಉನ್ನತ ವ್ಯಾಸಂಗ ಓದುವ ವಿದ್ಯಾರ್ಥಿಗಳಿಗೆ ನೀಡಿದರೆ ಅವರು ಜೀವನದಲ್ಲಿ ಮುಂದೆ ಬರುತ್ತಾರೆ. ಇದರಿಂದ ಆರ್ಥಿಕವಾಗಿ ಅಭಿವೃದ್ದಿಯಾಗಿ ದೇಶವು ಸಹ ಆರ್ಥಿಕವಾಗಿ ಅಭಿವೃದ್ದಿಯಾಗುತ್ತದೆ ಎಂದರು.
ಬ್ಯಾಂಕ್ ಉಪಾಧ್ಯಕ್ಷರಾದ ಡಾ. ಎಂ. ರಂಗಧಾಮಶೆಟ್ಟಿ ನಿರ್ದೇಶಕರಾದ ವೆಂಕಟಾಚಲಪತಿ ಬಿ.ಎಲ್. ಪಿ. ರುದ್ರಮೂರ್ತಿ, ನಾಗಭೂಷಣ್, ಎಸ್. ಸತ್ಯಮೂರ್ತಿ, ಎಂ.ಸಿ. ಫಾಲನೇತ್ರ, ಲೋಹಿತ್ ಜಿ. ನಂಜೇಗೌಡ, ಪಿ.ಕೆ. ರವೀಂದ್ರ, ಎನ್. ಮಹಾಲಕ್ಷ್ಮಿ, ಎಚ್. ಮಾರುತಿ, ಅನ್ನಪೂರ್ಣಮ್ಮ, ರಚನಾ ಎಸ್, ಜಯಲಕ್ಷ್ಮಿ ಜಿ. ತೋಟಗೇರ. ಪ್ರಭಾರ ಪ್ರಧಾನ ವ್ಯವಸ್ಥಾಪಕರಾಗಿ ಕೆ.ಎನ್. ಕೃಷ್ಣಯ್ಯ ಶೆಟ್ಟಿ, ಪೂರ್ಣಾವಧಿ ಸಲಹೆಗಾರರಾಗಿ ಬಿ.ಆರ್. ನಾಗರಾಜ್ ಉಪಸ್ಥಿತರಿದ್ದರು.