ಇವರು ಗ್ಯಾಸ್ ಸಿಲೆಂಡರ್ ಗಳನ್ನು ಕೊಡುವಾಗ ಬಿಲ್ಲುಗಳನ್ನು ವಿತರಿಸುವುದಿಲ್ಲ . ಅಕ್ರಮವಾಗಿ ಗ್ಯಾಸ್ ಫಿಲ್ಲಿಂಗ್ ಮಾಡುವಂತವರಿಗೆ ಕಳ್ಳ ಸಾಗಾಣಿಕೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಗ್ರಾಹಕರು ಹಾಗೂ ವಿತರಕರ ಹತ್ತಿರ ಸರಿಯಾದ ಸಮನ್ವಯ ಕೊರತೆ ಎದ್ದು ಕಾಣುತ್ತದೆ. ವಿತರಕರ ಹತ್ತಿರ ಕೆಲಸ ಮಾಡುವಂತಹ ಕೆಲಸಗಾರರಿಗೆ ಯಾವುದೇ ಜೀವವಿಮೆ ಇರುವುದಿಲ್ಲ. ಕಾರ್ಮಿಕ ಇಲಾಖೆಯ ನಿಯಮಾನುಸಾರ ನಿಗದಿತ ವೇತನ ನೀಡುತ್ತಿಲ್ಲ. ನಿಗದಿತ ಸಮಯಕ್ಕಿಂತ ಹೆಚ್ಚಿನ ಸಮಯ ದುಡಿಸಿಕೊಳ್ಳುತ್ತಿದ್ದಾರೆ. ಇನ್ನು ಅನೇಕ ಅಕ್ರಮಗಳಿಂದ ಕೂಡಿದ ಪ್ರೇರಣ ಇಂಡಿಯನ್ ಗ್ಯಾಸ್ ಗ್ರಾಮೀಣ ವಿತರಕರ ವಿರುದ್ಧ ಇಂಡಿಯನ್ ಗ್ಯಾಸ್( ಪ್ರೈ) ಕಂಪನಿ ಬೆಂಗಳೂರಿನ ವ್ಯವಸ್ಥಾಪಕರಾದ ಭರತ್ ಚಂದ್ರ ರವರಿಗೆ ಮನವಿ ಪತ್ರ ನೀಡಿದರು.

ಈ ಸಂದರ್ಭದಲ್ಲಿ ನಾಯಕನಹಟ್ಟಿ ಹೋಬಳಿ ಅಧ್ಯಕ್ಷ ಡಾ. ನಾಗರಾಜ್ ಮೀಸೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಮಂಜುನಾಥ್ ಗೌರವಾಧ್ಯಕ್ಷರು , ಸಿಎಸ್ ರಾಘವೇಂದ್ರ ಕೆಎ ಮಂಜುನಾಥ್ ನಗರ ಕಾರ್ಯದರ್ಶಿ. ಯುವ ಮುಖಂಡರಾದ ಟಿ,ಬಸವರಾಜ್, ಬಿಟಿ ಶಿವಕುಮಾರ್. ಹಾಗೂ ಕಾಲೋನಿಯ ಹಿರಿಯರಾದ ತಿಪ್ಪೇಸ್ವಾಮಿ( ಕಾಜಾ) ಕೆಡಿ ತಿಮ್ಮಣ್ಣ, ಎಸ್ ಬಾಬು, ಪ್ರದೀಪ, ಕೃಷ್ಣಮೂರ್ತಿ, ಮಾರಜ್ಜ,ಮತ್ತಿತರರು ಹಾಜರಿದ್ದರು.