ಸ್ಪಧೆ೯ಗಳಲ್ಲಿ ವಿಜೇತರಾದವರಿಗೆ ಬಿಜೆಪಿಯ ಹಿರಿಯ ಮುಖಂಡರು ಹಾಗೂ ಮಾಜಿ ಸಚಿವರು ಆದ ಬಿ. ಶ್ರೀರಾಮುಲು ಹಾಗೂ ಮಹಾನಗರ ಪಾಲಿಕೆಯ ಸದಸ್ಯರಾದ ಎಂ. ಗೋವಿಂದರಾಜುಲು ಬಹುಮಾನ ಹಾಗೂ ನೆನಪಿನ ಕಾಣಿಕೆ ನೀಡಿ ಪುರಸ್ಕರಿಸಿದರು.
ಈ ಸಂಧರ್ಭದಲ್ಲಿ ಬಿ. ಶ್ರೀರಾಮುಲು ಹಾಗೂ ಎಂ. ಗೋವಿಂದ ರಾಜುಲು ಅವರನ್ನು ಭಾರತಿ ನಾಟ್ಯಕಲಾ ಟ್ರಸ್ಟ್ ವತಿಯಿಂದ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ವಿಶ್ವಹಿಂದೂ ಪರಿಷತ್ ಜಿಲ್ಲಾ ಕಾಯ೯ದಶಿ೯ ಅಶೋಕ ಚವ್ಹಾಣ ನೇತೃತ್ವದಲ್ಲಿ ಪರಿಷತ್ ಸದಸ್ಯರು ಬೈಕ್ ರ್ಯಾಲಿ ಮೂಲಕ ಆಗಮಿಸಿ ಗಣೇಶನಿಗೆ ಪೂಜೆ ಸಲ್ಲಿಸಿದರು. ನಂತರ ಭಾರತಿ ನಾಟ್ಯ ಕಲಾ ಟ್ರಸ್ಟ್ ನ ನೃತ್ಯ ಗುರುಗಳಾದ ಎಂ. ವೈಷ್ಣವಿ ಕುಲಕರ್ಣಿ ಯವರಿಗೆ ವಿಶ್ವ ಹಿಂದೂ ಪರಿಷತ್ ವತಿಯಿಂದ ನೆನಪಿನ ಕಾಣಿಕೆ ನೀಡಿ ಸನ್ಮಾಸಿದರು.
ಕಾಯ೯ಕ್ರಮದಲ್ಲಿ ಗಡಂಗ ಬೀದಿ ಯ ಮುಖಂಡರಾದ ಶ್ರೀನಿವಾಸ ಮೊದಲಿಯಾರ, ಎಂ. ಜಯಸಿಂಹ ಕುಲಕರ್ಣಿ, ಎಂ. ನರಸಿಂಹ ಕುಲಕರ್ಣಿ, ಲಿಂಗಣ್ಣ, ಗೋವಿಂದ್, ಫಕೀರಪ್ಪ, ಟ್ರಸ್ಟ್ ಅಧ್ಯಕ್ಷರಾದ ಎಂ. ಭೀಮರಾವ್ ಕುಲಕರ್ಣಿ, ವೈಷ್ಣವಿ ಕುಲಕರ್ಣಿ, ವಿಜಯಲಕ್ಷ್ಮಿ ಕುಲಕರ್ಣಿ, ಶ್ವೇತಾ ಚವ್ವಾಣ, ಗಾಯಿತ್ರಿ, ಜಯಮ್ಮ, ನಿಖಿತಾ ಉಪಸ್ಥಿತರಿದ್ದರು.
ವಿಜಯಲಕ್ಷ್ಮಿ ಭೀಮರಾವ ಕುಲಕರ್ಣಿ ಅವರು ಪ್ರಾರ್ಥಿಸಿದರು. ಮುಕ್ತಾ ವೇಣಿ ಕಾಯ೯ಕ್ರಮ ನಿರೂಪಿಸಿದರು.